alex Certify ಈ ʼರಾಶಿʼ ಯಲ್ಲಿ ಜನಿಸಿದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಇಂದಿನ ದಿನ ಭವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼರಾಶಿʼ ಯಲ್ಲಿ ಜನಿಸಿದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಇಂದಿನ ದಿನ ಭವಿಷ್ಯ

ಮೇಷ : ಇವತ್ತು ನಿಮ್ಮಲ್ಲಿ ಕೋಪ ಮತ್ತು ಆವೇಶ ಹೆಚ್ಚಾಗಿರುತ್ತದೆ. ಇದು ನಿಮ್ಮ ಆರೋಗ್ಯಕ್ಕೂ ಕೇಡುಂಟು ಮಾಡಬಹುದು. ಕುಟುಂಬದವರೊಂದಿಗೂ ಕೋಪದಿಂದ ವರ್ತಿಸುತ್ತೀರಿ. ಮಧ್ಯಾಹ್ನದ ನಂತರ ಆರೋಗ್ಯ ಸುಧಾರಿಸಲಿದೆ.

ವೃಷಭ : ಬೆಳಗಿನ ಸಮಯ ಶುಭದಾಯಕವಾಗಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರಶಂಸೆ ಸಿಗಲಿದೆ. ಬಾಕಿ ವಸೂಲಿಯಾಗಲಿದೆ. ಕುಟುಂಬದಲ್ಲೂ ಆನಂದದ ವಾತಾವರಣವಿರಲಿದೆ. ಮಧ್ಯಾಹ್ನದ ನಂತರ ಪ್ರತಿಕೂಲ ಪರಿಸ್ಥಿತಿ ಎದುರಾಗಲಿದೆ.

ಮಿಥುನ : ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಉತ್ಸಾಹದಿಂದ ಕೆಲಸ ಮಾಡಲಿದ್ದೀರಿ. ಪದೋನ್ನತಿ ದೊರೆಯಲಿದೆ. ಸರ್ಕಾರಿ ಕಾರ್ಯ ಸರಳವಾಗಿ ಮುಕ್ತಾಯವಾಗಲಿದೆ.

ಕರ್ಕ : ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಸಾಮಾಜಿಕ ಗೌರವ, ಪ್ರತಿಷ್ಠೆ ಹೆಚ್ಚುತ್ತದೆ. ಮಧ್ಯಾಹ್ನದ ನಂತರ ಮನರಂಜನಾ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿದ್ದೀರಿ.

ಸಿಂಹ : ಮನಸ್ಸು ವ್ಯಗ್ರವಾಗಿರುತ್ತದೆ. ಅಧಿಕ ಸಂವೇದನಾಶೀಲರಾಗಿರುತ್ತೀರಾ. ಯಾರೊಂದಿಗೂ ವಾದ-ವಿವಾದದಲ್ಲಿ ತೊಡಗಬೇಡಿ. ಸ್ನೇಹಿತರೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಇದೇ ವಿಚಾರಕ್ಕೆ ದುಃಖಿತರಾಗಲಿದ್ದೀರಿ.

ಕನ್ಯಾ : ಆರ್ಥಿಕ ಆಯೋಜನೆಯಲ್ಲಿ ಸ್ವಲ್ಪ ಅಡೆತಡೆ ಉಂಟಾಗಬಹುದು. ಮಿತ್ರರನ್ನು ಭೇಟಿಯಾಗಲಿದ್ದೀರಿ. ವ್ಯಾಪಾರ ಕ್ಷೇತ್ರದಲ್ಲಿ ಸಹಯೋಗದ ವಾತಾವರಣವಿರುತ್ತದೆ. ಮಾನಸಿಕ ಸ್ವಾಸ್ಥ್ಯ ಚೆನ್ನಾಗಿರುತ್ತದೆ.

ತುಲಾ : ದಿನದ ಆರಂಭದಲ್ಲಿ ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬಸ್ಥರು ಮತ್ತು ಮಿತ್ರರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ಖರ್ಚು ಹೆಚ್ಚಾಗದಂತೆ ಎಚ್ಚರ ವಹಿಸಿ.

ವೃಶ್ಚಿಕ : ಸಂಬಂಧಿಕರೊಂದಿಗೆ ಸುತ್ತಾಟ, ಭೋಜನ ಮಾಡಲಿದ್ದೀರಿ. ವಾಹನ ಸುಖ ದೊರೆಯಲಿದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ನಿಮ್ಮದಾಗುತ್ತದೆ. ಮಧ್ಯಾಹ್ನದ ನಂತರ ಅಧಿಕ ಹಣ ಖರ್ಚಾಗಲಿದೆ.

ಧನು : ಕಲೆಯ ಬಗ್ಗೆ ಅಭಿರುಚಿ ಹೆಚ್ಚಲಿದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ಪ್ರೀತಿಪಾತ್ರರ ಭೇಟಿ ಆನಂದದಾಯಕವಾಗಿರುತ್ತದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ.

ಮಕರ : ಇಂದು ವಿರೋಧಿಗಳು ಮತ್ತು ಪ್ರತಿಸ್ಪರ್ಧಿಗಳೊಂದಿಗೆ ವಾದ – ವಿವಾದಕ್ಕಿಳಿಯಬೇಡಿ. ವ್ಯಾಪಾರದಲ್ಲೂ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು.

ಕುಂಭ : ಇವತ್ತು ನಿಮ್ಮ ಆದಾಯ ಕಡಿಮೆ ಮತ್ತು ಖರ್ಚು ಹೆಚ್ಚಾಗಲಿದೆ. ಕಣ್ಣು ನೋವು ಕಾಣಿಸಿಕೊಳ್ಳಲಿದೆ. ಮಾತು ಮತ್ತು ವರ್ತನೆ ಮೇಲೆ ನಿಯಂತ್ರಣ ಇರಲಿ. ಮಧ್ಯಾಹ್ನದ ನಂತರ ಮನಸ್ಸು ಪರಿವರ್ತನೆಯಾಗಲಿದೆ.

ಮೀನ : ಇಂದು ಸಮಾಧಾನದಿಂದಿರುವುದು ಒಳಿತು. ಕೋಪದಿಂದ ಹಾನಿಯಾಗಲಿದೆ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಯಿಂದ ವ್ಯಗ್ರರಾಗುತ್ತೀರಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ವರ್ತನೆ ನಕಾರಾತ್ಮಕವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...