alex Certify ಈಶ್ವರಪ್ಪ ಶಾಸಕ ಸ್ಥಾನ ತ್ಯಜಿಸಿ ಹರ್ಷನ ತಂಗಿಗೆ ಟಿಕೆಟ್ ನೀಡಲಿ; ಅವಿರೋಧವಾಗಿ ಆಯ್ಕೆ ಮಾಡಿಸುತ್ತೇವೆ ಎಂದ ಸಿ.ಎಂ. ಇಬ್ರಾಹಿಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಶ್ವರಪ್ಪ ಶಾಸಕ ಸ್ಥಾನ ತ್ಯಜಿಸಿ ಹರ್ಷನ ತಂಗಿಗೆ ಟಿಕೆಟ್ ನೀಡಲಿ; ಅವಿರೋಧವಾಗಿ ಆಯ್ಕೆ ಮಾಡಿಸುತ್ತೇವೆ ಎಂದ ಸಿ.ಎಂ. ಇಬ್ರಾಹಿಂ

ಮಡಿಕೇರಿ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಶಾಸಕ ಸ್ಥಾನವನ್ನು ತ್ಯಜಿಸಿ ಹರ್ಷನ ತಂಗಿಗೆ ಟಿಕೆಟ್ ನೀಡಲಿ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಒತ್ತಾಯಿಸಿದ್ದಾರೆ.

ಕೊಡಗಿನಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇತ್ತೀಚೆಗೆ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಸ್ಥಳೀಯ ಶಾಸಕರಾಗಿರುವ ಈಶ್ವರಪ್ಪ ತಮ್ಮ ಟಿಕೆಟ್ ತ್ಯಜಿಸಿ ಮೃತ ಹರ್ಷನ ತಂಗಿಗೆ ಟಿಕೆಟ್ ಕೊಡಲಿ. ಆಗ ನಾವು ಚುನಾವಣೆಗೆ ಸ್ಪರ್ಧಿಸಲ್ಲ. ಅವಿರೋಧವಾಗಿ ಅವರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸುತ್ತೇವೆ ಎಂದರು.

ಇನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಕೂಡ ತಮ್ಮ ಸಂಸದ ಸ್ಥಾನವನ್ನು ತ್ಯಜಿಸಿ ಹರ್ಷನ ತಾಯಿಗೆ ಟಿಕೆಟ್ ಕೊಡಲಿ. ಆಗ ಹಿಂದೂ ಸಂಸ್ಕೃತಿಗೆ ನಿಜವಾದ ಗೌರವ ಸಿಕ್ಕಂತಾಗುತ್ತದೆ ಎಂದು ಹೇಳಿದ್ದಾರೆ.

ತೇಜಸ್ವಿ ಸೂರ್ಯ ಪಾರ್ಲಿಮೆಂಟ್ ಗೆ ಹೋದ. ಅವರದೇ ವಯಸ್ಸಿನ ಹರ್ಷ ಸ್ಮಶಾನ ಸೇರಿದ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವವರು ಬಿಜೆಪಿ ನಾಯಕರು ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...