alex Certify ಈಜಲೆಂದು ನೀರಿಗಿಳಿದಿದ್ದ ‘ಬಾಡಿ ಬಿಲ್ಡರ್’ ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಜಲೆಂದು ನೀರಿಗಿಳಿದಿದ್ದ ‘ಬಾಡಿ ಬಿಲ್ಡರ್’ ನಾಪತ್ತೆ

ತಮ್ಮ ಸ್ನೇಹಿತರ ಜೊತೆ ಕಾರಿನಲ್ಲಿ ಭದ್ರಾ ಚಾನೆಲ್ ಬಳಿ ತೆರಳಿದ್ದ ಬಾಡಿ ಬಿಲ್ಡರ್ ಒಬ್ಬರು, ಈಜುವ ಸಲುವಾಗಿ ನೀರಿಗಿಳಿದ ವೇಳೆ ಕೊಚ್ಚಿ ಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ಸಮೀಪದ ಸಿರಿಯೂರಿನಲ್ಲಿ ನಡೆದಿದೆ.

ಭದ್ರಾವತಿ ನಗರದ ಹೊಸ ಬುಳ್ಳಾಪುರ ವಾಸಿ 25 ವರ್ಷದ ರತಿಲಾ ಕುಮಾರ್ ನಾಪತ್ತೆಯಾದವರಾಗಿದ್ದು, ಶುಕ್ರವಾರದಂದು ಇವರು ಸಿರಿಯೂರು ಬಳಿಯ ಭದ್ರಾ ಚಾನೆಲ್ ಗೆ ತೆರಳಿದ್ದರು.

ಇವರು ಈಜಲು ಮುಂದಾದ ವೇಳೆ ಸ್ನೇಹಿತರು ಬೇಡವೆಂದರೂ ಸಹ ಕೇಳಲಿಲ್ಲ ಎನ್ನಲಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಶುಕ್ರವಾರ ಸಂಜೆಯವರೆಗೂ ಅವರು ಪತ್ತೆಯಾಗಿರಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...