alex Certify ಆಪತ್ಕಾಲದಲ್ಲಿ ಆಗಿದ್ದೇ ತಪ್ಪಾಯ್ತು…! ಮರಳಿ ಹಣ ಕೇಳಿದ್ದಕ್ಕೆ ನಡೆದೇ ಹೋಯಿತು ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪತ್ಕಾಲದಲ್ಲಿ ಆಗಿದ್ದೇ ತಪ್ಪಾಯ್ತು…! ಮರಳಿ ಹಣ ಕೇಳಿದ್ದಕ್ಕೆ ನಡೆದೇ ಹೋಯಿತು ಕೊಲೆ

ಕೊಡಗು: ಆಪತ್ಕಾಲಕ್ಕೆ ಆಗಿದ್ದವನನ್ನೇ ಪತಿ, ಸಹೋದರ ಹಾಗೂ ಪತ್ನಿ ಸೇರಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚೆಗಷ್ಟೇ ಕೋಣನೂರಿನ ಲಾಡ್ಜ್ ನಲ್ಲಿ ವ್ಯಕ್ತಿಯೊಬ್ಬನ ಕೊಲೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದರು. ಈಗ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನ ಹೊಸಕೋಟೆ ಗ್ರಾಮದ ಹರೀಶ್ ಎಂಬ ವ್ಯಕ್ತಿಯೇ ಹೀಗೆ ಲಾಡ್ಜ್ ನಲ್ಲಿ ಸಾವನ್ನಪ್ಪಿದ್ದ. ಆತನ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಆತನ ಸ್ನೇಹಿತನಾದ ದಿಲೀಪ್, ಸಹೋದರ ಲಕ್ಷ್ಮಣ್ ಹಾಗೂ ಪತ್ನಿ ಸುಶ್ಮಿತಾಳನ್ನು ಬಂಧಿಸಿದ್ದಾರೆ.

ಹರೀಶ್ ನಿಂದ ಆರೋಪಿತರು 1 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಇತ್ತೀಚೆಗೆ ಹರೀಶ್ ನಿಗೆ ಹಣದ ಅಡಚಣೆಯಾಗಿತ್ತು. ಹೀಗಾಗಿ ಕೊಟ್ಟ ಸಾಲವನ್ನು ಇವರ ಹತ್ತಿರ ಮರಳಿ ಕೇಳಿದ್ದಾನೆ. ಹಣ ನೀಡುವುದಾಗಿ ಹೇಳಿದ್ದ ಆರೋಪಿಗಳು ಹರೀಶ್ ನನ್ನು ಲಾಡ್ಜ್ ಗೆ ಕರೆಯಿಸಿದ್ದಾರೆ.

ಸುಶ್ಮಿತಾ ಹಣ ನೀಡುವುದಾಗಿ ಹರೀಶ್ ಗೆ ಮೊದಲು ಫೋನ್ ಮಾಡಿದ್ದಾರೆ. ನಾವು ಪ್ರವಾಸಕ್ಕೆ ಬಂದಿದ್ದೇವೆ. ಹೋಗುವುದು ತಡವಾಗುತ್ತದೆ. ಹೀಗಾಗಿ ಇಲ್ಲಿಯೇ ಲಾಡ್ಜ್ ಬುಕ್ ಮಾಡಿದ್ದೇವೆ. ಅಲ್ಲಿಯೇ ಬನ್ನಿ ಎಂದು ಹರೀಶ್ ಗೆ ಹೇಳಿದ್ದಾರೆ.

ಆನಂತರ ಸುಶ್ಮಿತಾ, ಹರೀಶ್ ನನ್ನು ರೂಮ್ ಗೆ ಕರೆದುಕೊಂಡು ಹೋಗಿದ್ದಾಳೆ. ಅದೇ ರೂಮ್ ನ ಶೌಚಾಲಯದಲ್ಲಿ ದಿಲೀಪ್ ಹಾಗೂ ಲಕ್ಷ್ಮಣ್ ಇದ್ದಾರೆ. ರೂಮ್ ನಲ್ಲಿ ಮಾತನಾಡುತ್ತ ಕುಳಿತ ಸುಶ್ಮಿತಾ, ಹರೀಶ್ ಕಣ್ಣಿಗೆ ಕಾರದ ಪುಡಿ ಎರಚಿದ್ದಾಳೆ. ಆಗ ದಿಲೀಪ್ ಹಾಗೂ ಲಕ್ಷ್ಮಣ್ ಸೇರಿಕೊಂಡು ಕೊಚ್ಚಿ ಕೊಲೆ ಮಾಡಿದ್ದಾರೆ. ಆ ನಂತರ ಎಲ್ಲರೂ ಪರಾರಿಯಾಗಿದ್ದರು.

ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...