alex Certify ಆಟೋ ಸಮೇತ ಚಾಲಕನಿಗೆ ಬೆಂಕಿ, ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋ ಸಮೇತ ಚಾಲಕನಿಗೆ ಬೆಂಕಿ, ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಮಲ್ಲಯ್ಯನಗುರ್ಕಿ ಗ್ರಾಮದ ಬಳಿ ಆಟೋ ಸಮೇತ ಚಾಲಕನನ್ನು ಸುಟ್ಟು ಹಾಕಲಾಗಿದೆ.

ಅಪ್ಪು ಅಲಿಯಾಸ್ ರಮೇಶ್ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಗಂಗಮ್ಮನ ಪಾಳ್ಯ ನಿವಾಸಿಯಾಗಿರುವ ರಮೇಶ್ ಬೆಂಗಳೂರಿನಲ್ಲಿ ಆಟೊ ಚಾಲನೆ ಮಾಡಿಕೊಂಡಿದ್ದ. ಲಾಕ್ ಡೌನ್ ನಂತರ ಬಂಗಾರಪೇಟೆಗೆ ಆಗಮಿಸಿ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ರಮೇಶ ಪತ್ನಿಯಿಂದ ದೂರವಾಗಿದ್ದ. ಆತನ ಇಬ್ಬರು ಮಕ್ಕಳನ್ನು ಸಹೋದರ ಸಾಕುತ್ತಿದ್ದ. ಜನವರಿ 22 ರಂದು ರಮೇಶ್ ನನ್ನು ಕೊಲೆಮಾಡಿದ ದುಷ್ಕರ್ಮಿಗಳು ಆಟೋ ಸಮೇತ ಸುಟ್ಟು ಹಾಕಿದ್ದಾರೆ. ಅರೆಬೆಂದ ಸ್ಥಿತಿಯಲ್ಲಿ ಆತನ ಮೃತದೇಹ ಕಂಡು ಬಂದಿದ್ದು, ಬಂಗಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...