alex Certify ಆರೋಗ್ಯಕ್ಕೆ ಅಮೃತವಿದು ತ್ರಿಫಲ ಚೂರ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಅಮೃತವಿದು ತ್ರಿಫಲ ಚೂರ್ಣ

ತ್ರಿಫಲ ಚೂರ್ಣ ಎಂದರೆ ಬೆಟ್ಟದ ನೆಲ್ಲಿಕಾಯಿ, ತಾರೆ ಕಾಯಿ, ಕರಕ ಕಾಯಿಗಳ ಮಿಶ್ರಣ. ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಕಾರಿಯಾದ ಇದನ್ನು ಮನೆಯಲ್ಲಿ ತಯಾರಿಸಲು ಕಷ್ಟವಾದರೆ ಆಯುರ್ವೇದದ ಔಷಧಾಲಯಗಳಿಂದಲೂ ತಂದು ಉಪಯೋಗಿಸಬಹುದು. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಪ್ರತಿದಿನ 1 ರಿಂದ 5 ಗ್ರಾಂ ತ್ರಿಫಲ ಚೂರ್ಣವನ್ನು ಪ್ರತಿಯೊಬ್ಬರು ಸೇವಿಸಬಹುದು. ಇದರಿಂದ ಕೆಮ್ಮು, ಕಫ, ಶೀತದಂತ ಸಮಸ್ಯೆಯಿಂದ ದೂರವಿರಬಹುದು.

ಅಜೀರ್ಣ ಅಥವಾ ಭೇದಿಯ ಸಂದರ್ಭದಲ್ಲಿ ಸ್ವಲ್ಪ ನೀರಿನ ಜೊತೆ 1 ಚಮಚ ಚೂರ್ಣವನ್ನು ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯಬೇಕು.

ಮಲಬದ್ದತೆ ಆದಾಗ 5 ಗ್ರಾಂ ಚೂರ್ಣವನ್ನು ಜೇನು ತುಪ್ಪದ ಜೊತೆ ತಿಂದು ಅರ್ಧ ಲೋಟ ಹಾಲಿನ ಜೊತೆ ಕುಡಿದರೆ ಪರಿಹಾರವಾಗುತ್ತದೆ. ರಕ್ತ ಶುದ್ಧಿಯೊಂದಿಗೆ ಜೀರ್ಣಕ್ರಿಯೆ ಸಮಸ್ಯೆಯನ್ನು ಪರಿಹರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...