alex Certify ಅಪ್ಪು ನೆನೆದು ಭಾವುಕರಾದ ಜೂ. ಎನ್ ಟಿ ಆರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪು ನೆನೆದು ಭಾವುಕರಾದ ಜೂ. ಎನ್ ಟಿ ಆರ್

ಬೆಂಗಳೂರು : ಅಪ್ಪು ಅಗಲಿ ಹಲವು ದಿನ ಕಳೆದರೂ ಅವರ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಆತ್ಮೀಯರು ಇನ್ನೂ ಕಣ್ಣೀರು ಸುರಿಸುತ್ತಿದ್ದಾರೆ. ಇಂದು ಕೂಡ ಅವರ ಆತ್ಮೀಯ ಸ್ನೇಹಿತ, ಪುನೀತ್ ನೆನೆದು ಭಾವುಕರಾಗಿದ್ದಾರೆ.

ಇಂದು ನಗರಕ್ಕೆ ಆರ್ ಆರ್ ಆರ್ ಚಿತ್ರ ತಂಡ ಪ್ರಚಾರಕ್ಕಾಗಿ ಆಗಮಿಸಿ ಸುದ್ದಿಗೋಷ್ಠಿ ನಡೆಸಿತ್ತು. ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟಿ ಆಲಿಯಾ ಭಟ್, ನಟ ರಾಮ್ ಚರಣ್ ಹಾಗೂ ಜ್ಯೂ.ಎನ್ ಟಿ ಆರ್ ಮಾತನಾಡಿದರು.

ಈ ಸಂದರ್ಭದಲ್ಲಿ ಜ್ಯೂ. ಎನ್ ಟಿ ಆರ್ ಮಾತನಾಡಿ, ನಮಗೂ ಹಾಗೂ ರಾಜ್ ಕುಟುಂಬಕ್ಕೂ ತುಂಬಾ ಆತ್ಮೀಯ ಸಂಬಂಧವಿದೆ. ಅಪ್ಪು ಇಲ್ಲ ಎನ್ನುವುದನ್ನು ನನಗೆ ಇಂದಿಗೂ ಒಪ್ಪಲು ಆಗುತ್ತಿಲ್ಲ. ಅಪ್ಪು ಇಲ್ಲದೆ ಕೇವಲ ಚಂದನವನ ಮಾತ್ರವಲ್ಲ, ಇಡೀ ಕರ್ನಾಟಕವೇ ಶೂನ್ಯವಾಗಿದೆ ಎಂದು ಭಾವಕರಾದರು. ಅಲ್ಲದೇ, ಈ ಸಂದರ್ಭದಲ್ಲಿ ಅಪ್ಪುಗಾಗಿ ಗೆಳೆಯ ನನ್ನ ಗೆಳೆಯ ಎಂಬ ಹಾಡನ್ನು ಹಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...