alex Certify ಅಧಿಕಾರಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಸಿ.ಆರ್.ಪಿ.ಎಫ್. ಯೋಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕಾರಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಸಿ.ಆರ್.ಪಿ.ಎಫ್. ಯೋಧ

ತೆಲಂಗಾಣ : ಸಿ.ಆರ್.ಪಿ.ಎಫ್. ನಲ್ಲಿ ಕೆಲಸ ಮಾಡುತ್ತಿದ್ದ ಯೋಧನೊಬ್ಬ ತನ್ನ ಮೇಲಾಧಿಕಾರಿಗೆ ಗುಂಡು ಹಾರಿಸಿ ಆ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ರಾಜ್ಯದ ವೆಂಕಟಾಪುರಂ ಎಂಬ ಹಳ್ಳಿಯಲ್ಲಿದ್ದ ವೆಂಕಟಾಪುರಂ ಮಂಡಲ ಕೇಂದ್ರ 39 ಬೆಟಾಲಿಯನ್ ನಲ್ಲಿ ನಡೆದಿದ್ದು, ಈ ಕುರಿತು ಜಿಲ್ಲಾ ಎಸ್ ಪಿ ಸಂಗ್ರಾಮ್ ಸಿಂಗ್ ಮಾಹಿತಿ ನೀಡಿದ್ದಾರೆ.

ಮೇಕೆದಾಟು ಪಾದಯಾತ್ರೆ; ಸಾಧು ಕೋಕಿಲಾಗೆ ಸೆಲೆಬ್ರಿಟಿಗಳನ್ನು ಕರೆತರುವ ಜವಾಬ್ದಾರಿ ನೀಡಿದ ಕಾಂಗ್ರೆಸ್

ಸಿ.ಆರ್.ಪಿ.ಎಫ್., ಎಸ್ ಐ ಉಮೇಶ್ ಹಾಗೂ ಯೋಧ ಸ್ಟೀಫನ್ ಮಧ್ಯೆ ಯಾವುದೋ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಕೋಪದಲ್ಲಿದ್ದ ಸ್ಪೀಫನ್ ತನ್ನ ಗನ್ ನಿಂದಲೇ ಎಸ್ ಐ ಮೇಲೆ ಗುಂಡು ಹಾರಿಸಿದ್ದಾನೆ. ಆ ನಂತರ ಅದೇ ಗನ್ ಬಳಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

ಗುಂಡು ಹಾರಿಸುತ್ತಿದ್ದಂತೆ ಎಸ್ ಐ ಸಾವನ್ನಪ್ಪಿದ್ದು, ಸ್ಟೀಫನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...