alex Certify ಅತ್ತೆ ಸಾವಿನ ಸುದ್ದಿ ಕೇಳಿ ಅಳಿಯನೂ ಸಾವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ತೆ ಸಾವಿನ ಸುದ್ದಿ ಕೇಳಿ ಅಳಿಯನೂ ಸಾವು…!

ಶಿವಮೊಗ್ಗ: ಅತ್ತೆಯನ್ನು ಬಸ್ ನಿಲ್ದಾಣಕ್ಕೆ ಕರೆ ತಂದ ಅಳಿಯ ಬೆಂಗಳೂರಿಗೆ ಕಳುಹಿಸಲು ಕೆ ಎಸ್ ಆರ್ ಟಿ ಸಿ ಬಸ್ ಹತ್ತಿಸಿದ್ದಾರೆ. ಅತ್ತೆ ಸೇಫ್ ಆಗಿ ಬೆಂಗಳೂರು ತಲುಪಲಿ ಎಂದು ಕಳುಹಿಸಿದ ಅಳಿಯನಿಗೆ ಸ್ವಲ್ಪ ಹೊತ್ತಿನಲ್ಲೇ ಬಿಗ್ ಶಾಕ್ ಒಂದು ಕಾದಿತ್ತು. ಇನ್ನೇನು ಅತ್ತೆ ಊರಿಗೆ ಹೋಗ್ತಾ ಇದ್ದಾರೆ ಅಂದುಕೊಂಡ ಅಳಿಯನ ಊಹೆಗೆ ವಿಧಿ ತಣ್ಣೀರೆರೆಚಿದೆ.

ಹೌದು, ಲಕ್ಷಮ್ಮ ಎಂಬುವವರ ಅಳಿಯ ಗುಲ್ಫತ್ ಸಿಂಗ್ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಅತ್ತೆಯನ್ನು ಕಳುಹಿಸಿದ್ದಾರೆ. ಈ ಬಸ್ಸು ಆನಂದಪುರ ಸಮೀಪ ಹೋಗುತ್ತಿದ್ದಾಗ ಅತ್ತೆ ಲಕ್ಷ್ಮಮ್ಮನಿಗೆ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿದ್ದ ನಿರ್ವಾಹಕ ಲಕ್ಷ್ಮಮ್ಮ ಸಂಬಂಧಿಕರಿಗೆ ಕರೆ ಮಾಡಿ ಮೃತಪಟ್ಟ ಸುದ್ದಿ ತಿಳಿಸಿದ್ದಾರೆ. ಇತ್ತ ಸಾವಿನ ಸುದ್ದಿ ಕೇಳ್ತಾ ಇದ್ದಂಗೆ ಅಳಿಯ ಗುಲ್ಛತ್ ಅವರಿಗೂ ಹೃದಯಾಘಾತವಾಗಿದೆ.

ಲಿಂಗನಮಕ್ಕಿಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ವೇಳೆಯಲ್ಲಿ ಆವರಿಗೂ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಳಿಯ ಹಾಗೂ ಅತ್ತೆ ಇಬ್ಬರ ಸಾವಿನಿಂದ ಇಡೀ ಕುಟುಂಬ ಕಣ್ಣೀರಿಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...