alex Certify ಅಡೆತಡೆ ಬಂದರೂ ಮಹಿಷಾ ದಸರಾ ಆಚರಣೆ ಬಿಡುವುದಿಲ್ಲ; ಮಾಜಿ ಮೇಯರ್ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡೆತಡೆ ಬಂದರೂ ಮಹಿಷಾ ದಸರಾ ಆಚರಣೆ ಬಿಡುವುದಿಲ್ಲ; ಮಾಜಿ ಮೇಯರ್ ಹೇಳಿಕೆ

ಯಾವುದೇ ಅಡೆತಡೆ ಬಂದರೂ ಸಹ ಮಹಿಷಾ ದಸರಾ ಆಚರಣೆ ಮಾಡಿಯೇ ಮಾಡುತ್ತೇವೆ. ಸೆಪ್ಟೆಂಬರ್ 24, 25ರಂದು ಚಾಮುಂಡಿ ಬೆಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಪೊಲೀಸ್ ಇಲಾಖೆ ಇದರ ಆಚರಣೆಗೆ ಅಡ್ಡಿಪಡಿಸುತ್ತಿದೆ. ಆದರೂ ಈ ಬಾರಿ ಯಾವುದೇ ಅಡೆತಡೆ ಬಂದರೂ ಸಹ ಇದನ್ನು ಆಚರಿಸುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಪ್ರೊ. ಕೆ.ಎಸ್. ಭಗವಾನ್, ಬೌದ್ಧರು ಒಂದು ಕಾಲದಲ್ಲಿ ಭಾರತದಲ್ಲಿ ಪ್ರಮುಖರಾಗಿದ್ದರು. ಮಹಿಷ ಸಹ ಬೌದ್ಧನಾಗಿದ್ದು, ಒಳ್ಳೆಯ ಆಡಳಿತ ನೀಡುತ್ತಿದ್ದ. ಈ ಕಾರಣಕ್ಕಾಗಿಯೇ ನಗರಕ್ಕೆ ಆತನ ಹೆಸರನ್ನು ಇರಿಸಲಾಗಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...