alex Certify ʼಸುಖ-ಸಮೃದ್ಧಿʼ ಬಯಸುವವರು ಲಕ್ಷ್ಮಿ ಪೂಜೆಯಂದು ಈ ತಪ್ಪುಗಳನ್ನು ಮಾಡಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸುಖ-ಸಮೃದ್ಧಿʼ ಬಯಸುವವರು ಲಕ್ಷ್ಮಿ ಪೂಜೆಯಂದು ಈ ತಪ್ಪುಗಳನ್ನು ಮಾಡಬೇಡಿ

ದೀಪಾವಳಿಯಂದು ಸುಖ-ಸಮೃದ್ಧಿ, ವೈಭವಕ್ಕಾಗಿ ಭಕ್ತರು ದೇವಿ ಲಕ್ಷ್ಮಿಯ ಆರಾಧನೆ ಮಾಡ್ತಾರೆ. ಆದ್ರೆ ಈ ದಿನ ನಾವು ಮಾಡುವ ಕೆಲವೊಂದು ಕೆಲಸ ದೇವಿಯ ಮುನಿಸಿಗೆ ಕಾರಣವಾಗುತ್ತದೆ. ವರ್ಷ ಪೂರ್ತಿ ದೇವಿ ಅವಕೃಪೆ ನಮ್ಮ ಮೇಲಿದ್ದು, ಬಡತನ, ಕಷ್ಟ ನಮ್ಮನ್ನು ಕಾಡುತ್ತೆ. ಹಾಗಾಗಿ ಮರೆತೂ ದೀಪಾವಳಿಯಂದು ಈ ತಪ್ಪುಗಳನ್ನು ಮಾಡಬೇಡಿ.

ಈ ದಿನ ಸಂಜೆ ಹೊತ್ತಿನಲ್ಲಿ ಮಲಗಬಾರದು. ಇದ್ರಿಂದ ದರಿದ್ರ ಆವರಿಸುತ್ತದೆ. ಯಾಕೆಂದ್ರೆ ಸಂಜೆ ಹೊತ್ತಿನಲ್ಲಿ ತಾಯಿ ಲಕ್ಷ್ಮಿ ಮನೆಗೆ ಬರ್ತಾಳೆ. ಈ ವೇಳೆ ಮಲಗಿದ್ರೆ ತಾಯಿ ಕೋಪಗೊಂಡು ಮನೆಯಿಂದ ವಾಪಸ್ ಹೋಗ್ತಾಳೆ.

ಲಕ್ಷ್ಮಿ ಪೂಜೆಯ ದಿನ ಹಿರಿಯರನ್ನು ಗೌರವಿಸಬೇಕು. ಮರೆತೂ ಕೆಟ್ಟ ಶಬ್ದಗಳ ಪ್ರಯೋಗ ಮಾಡಬಾರದು. ಹಿರಿಯರನ್ನು ಪ್ರೀತಿಯಿಂದ ನೋಡಿಕೋಡ್ರೆ  ಲಕ್ಷ್ಮಿ ಪ್ರಸನ್ನಳಾಗ್ತಾಳೆ.

ಈ ದಿನ ಕುಟುಂಬಸ್ಥರು ಗಲಾಟೆ, ಜಗಳ ಮಾಡಬಾರದು. ಶಾಂತವಾಗಿ, ಪ್ರೀತಿಯಿಂದಿರುವ ಮನೆಯನ್ನು ಮಾತ್ರ ಲಕ್ಷ್ಮಿ ಪ್ರವೇಶ ಮಾಡ್ತಾಳೆ.

ಎಲ್ಲಿ ಸ್ವಚ್ಛತೆ, ಸಂತೋಷವಿರುತ್ತದೆಯೋ ಆ ಮನೆಯನ್ನು ಲಕ್ಷ್ಮಿ ಪ್ರವೇಶ ಮಾಡ್ತಾಳೆ. ಹಾಗಾಗಿ ಮನೆಯ ಪ್ರತಿಯೊಂದು ಭಾಗವನ್ನೂ ಸ್ವಚ್ಛಗೊಳಿಸಬೇಕು. ಮನೆಯ ಹೊರಗೆ ರಂಗೋಲಿ ಹಾಕಬೇಕು. ಜೊತೆಗೆ ಹೂವಿನ ಮಾಲೆಯನ್ನು ಹಾಕಿ ಅಲಂಕಾರ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...