alex Certify ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುತ್ತೆ ಈ ಚಮತ್ಕಾರಿ ಎಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುತ್ತೆ ಈ ಚಮತ್ಕಾರಿ ಎಲೆ

ಕೊರೊನಾ ವೈರಸ್ ವಿರುದ್ಧ ಇಡೀ ವಿಶ್ವವೇ ಹೋರಾಟ ನಡೆಸುತ್ತಿದೆ. ವಿಶ್ವದಾದ್ಯಂತ ವಿಜ್ಞಾನಿಗಳು ಕೊರೊನಾಕ್ಕೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಕೊರೊನಾ ಸೋಂಕು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಈ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅನೇಕ ವಿಧಾನಗಳನ್ನು ಹೇಳಲಾಗಿದೆ. ಆದ್ರೆ ಅಮೃತ ಬಳ್ಳಿ ನಿಮ್ಮ ರೋಗ ನಿರೋಧ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಮೃತ ಬಳ್ಳಿ ಎಲೆಗಳ ರಸವನ್ನು ಕುಡಿಯುತ್ತ ಬಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ದೇಹಕ್ಕೆ ಹಾನಿಯುಂಟು ಮಾಡುವ ವೈರಸ್, ಸೋಂಕುಗಳು ಇದ್ರಿಂದ ನಾಶವಾಗುತ್ತದೆ. ಎಲೆಯಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ರಂಜಕ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದರ ಕಾಂಡಗಳಲ್ಲಿ ಉತ್ತಮ ಪ್ರಮಾಣದ ಪಿಷ್ಟವಿದೆ.

ರಕ್ತ ಹೀನತೆಯಿಂದ ಬಳಲುವವರು ಅಮೃತ ಬಳ್ಳಿ ಎಲೆಯನ್ನು ಬಳಸುವುದು ಉತ್ತಮ. ತುಪ್ಪ ಹಾಗೂ ಜೇನುತುಪ್ಪದ ಜೊತೆ ಬೆರೆಸಿ ಸೇವನೆ ಮಾಡುವುದರಿಂದ ರಕ್ತ ಹೀನತೆ ಕಡಿಮೆಯಾಗುತ್ತದೆ. ಕಾಮಾಲೆ ರೋಗಿಗಳಿಗೂ ಇದ್ರಿಂದ ಸಾಕಷ್ಟು ಪ್ರಯೋಜನವಿದೆ. ಕೆಲವರು ಎಲೆಯನ್ನು ಕುದಿಸಿ ಕುಡಿಯುತ್ತಾರೆ. ಇದನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದಲ್ಲಿ ಬೆರೆಸಿ ಕುಡಿಯಬಹುದು.

ಕಾಲು, ಕೈ ಉರಿ ಎನ್ನುವವರು ಅಮೃತಬಳ್ಳಿ ಎಲೆಗಳನ್ನು ಪುಡಿ ಮಾಡಿ ಅದನ್ನು ಬೆಳಿಗ್ಗೆ ಸಂಜೆ ಪಾದಕ್ಕೆ ಹಚ್ಚುತ್ತ ಬರಬೇಕು. ಎಲೆಗಳ ಕಷಾಯ ಕುಡಿಯುವುದು ಕೂಡ ಪ್ರಯೋಜನಕಾರಿ. ಹೊಟ್ಟೆ ಸಮಸ್ಯೆಯಿರುವವರು ಕಷಾಯ ಕುಡಿಯಬೇಕು. ಮಲಬದ್ಧತೆ, ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜ್ವರದಿಂದ ಬಳಲುವವರು ಇದ್ರ ಕಷಾಯ ಕುಡಿಯುವುದ್ರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...