alex Certify ʼಕ್ರಾಂತಿʼ ಸಿನಿಮಾದ ಪ್ರಮೋಷನ್ ಗಾಗಿ ʼಡಿ ಬಾಸ್ʼ ಅಭಿಮಾನಿಗಳಿಂದ ಭರ್ಜರಿ ರ್ಯಾಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ರಾಂತಿʼ ಸಿನಿಮಾದ ಪ್ರಮೋಷನ್ ಗಾಗಿ ʼಡಿ ಬಾಸ್ʼ ಅಭಿಮಾನಿಗಳಿಂದ ಭರ್ಜರಿ ರ್ಯಾಲಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ʼಕ್ರಾಂತಿʼ ಸಿನಿಮಾದ ಪ್ರಮೋಷನ್ ಗಾಗಿ ʼಡಿ ಬಾಸ್ʼ ಅಭಿಮಾನಿಗಳು ಇಂದು ಶಿವಮೊಗ್ಗದಲ್ಲಿ ಭರ್ಜರಿ ರ್ಯಾಲಿ ನಡೆಸಿದ್ದಾರೆ.

ದರ್ಶನ್ ಅಭಿನಯದ ʼಕ್ರಾಂತಿʼ ಸಿನಿಮಾದ ಪೋಸ್ಟರ್ಗಳನ್ನು ಹಿಡಿದು ಬಂದ ಅಭಿಮಾನಿಗಳು ದರ್ಶನ್ ಗೆ ಘೋಷಣೆ ಕೂಗಿದರು.

ಎಂ ಆರ್ ಎಸ್ ವೃತ್ತದಿಂದ ಹೊರಟ ರ್ಯಾಲಿ ವಿದ್ಯಾನಗರ, ಬಿಹೆಚ್ ರಸ್ತೆಯ ಮೂಲಕ ಎಎ ವೃತ್ತ, ನೆಹರೂ ರಸ್ತೆ, ಮಹಾವೀರ ವೃತ್ತದ ಮೂಲಕ ವೀರಭದ್ರ ಚಿತ್ರ ಮಂದಿರಕ್ಕೆ ಬಂದು ತಲುಪಿತು.

ಹಲವರು ಕ್ರಾಂತಿ ಪೋಸ್ಟರ್ ಗಳ ಟಿ ಶರ್ಟ್ ಧರಿಸಿ ಬಂದರೆ, ಕೆಲವರು ಕನ್ನಡ ನಾಡಿನ ಬಾವುಟ, ಕ್ರಾಂತಿ ಸಿನಿಮಾದ ಬಾವುಟ ಹಿಡಿದು ತಮ್ಮ ಅಭಿಮಾನ ಮೆರೆದರು. ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿ ದರ್ಶನ್ ಅಭಿಮಾನಿಗಳು ಸಂಭ್ರಮಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...