alex Certify ʼʼಚುನಾವಣೆ ಆಫರ್‌ ಮುಗೀತಿದೆ, ಪೆಟ್ರೋಲ್‌ ಟ್ಯಾಂಕ್‌ ತುಂಬಿಸ್ಕೊಳ್ಳಿʼʼ: ರಾಗಾ ಟ್ವೀಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼʼಚುನಾವಣೆ ಆಫರ್‌ ಮುಗೀತಿದೆ, ಪೆಟ್ರೋಲ್‌ ಟ್ಯಾಂಕ್‌ ತುಂಬಿಸ್ಕೊಳ್ಳಿʼʼ: ರಾಗಾ ಟ್ವೀಟ್‌

ವಿಧಾನಸಭಾ ಚುನಾವಣೆಯ ನಂತರ ಸನ್ನಿಹಿತವಾಗಲಿರುವ ಇಂಧನ ಬೆಲೆ ಏರಿಕೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಫರ್‌ ಶೀಘ್ರದಲ್ಲೇ ಕೊನೆಗೊಳ್ಳಲಿದೆ, ಹಾಗಾಗಿ ಎಲ್ಲರೂ ಪೆಟ್ರೋಲ್‌ ಟ್ಯಾಂಕ್‌ ಗಳನ್ನು ಭರ್ತಿ ಮಾಡಿಕೊಳ್ಳಿ ಅಂತಾ ಹೇಳಿದ್ದಾರೆ.

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರ ಅಂತ್ಯಗೊಂಡ ಬೆನ್ನಲ್ಲೇ, ರಾಗಾ ಮೋದಿ ಸರ್ಕಾರವನ್ನು ಟ್ವಿಟ್ಟರ್‌ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣೆ ಇರೋದ್ರಿಂದ ಕೇಂದ್ರದ ಮೋದಿ ಸರ್ಕಾರ ಪೆಟ್ರೋಲ್‌ ದರ ಏರಿಕೆಯನ್ನು ತಡೆಹಿಡಿದಿದೆ. ಚುನಾವಣೆ ಮುಗಿಯುತ್ತಿದ್ದಂತೆ ವಾಹನ ಸವಾರರ ಜೇಬಿಗೆ ಮೋದಿ ಸರ್ಕಾರ ಕತ್ತರಿ ಹಾಕಲಿದೆ ಅಂತಾ ರಾಹುಲ್‌ ಆರೋಪ ಮಾಡಿದ್ದಾರೆ.

ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳ ವಿಧಾನಸಭಾ ಚುನಾವಣೆ ಫೆಬ್ರವರಿ 10 ರಿಂದ ಆರಂಭವಾಗಿದೆ. ಮಾರ್ಚ್‌ 7ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮಾರ್ಚ್‌ 10ಕ್ಕೆ ಮತ ಎಣಿಕೆ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...