alex Certify ಋತು ಬದಲಾದಂತೆ ಕಾಡುತ್ತೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಋತು ಬದಲಾದಂತೆ ಕಾಡುತ್ತೆ ಈ ಸಮಸ್ಯೆ

ಮಳೆಗಾಲದಲ್ಲಿ ಸಾಮಾನ್ಯವಾಗಿ ಅನೇಕ ಕಾಯಿಲೆಗಳು ಕಾಡುತ್ತವೆ. ಈ ಬಾರಿ ಕೊರೊನಾ ಮಧ್ಯೆ ಋತು ಕಾಯಿಲೆ ಎದುರಿಸುವ ಸವಾಲು ಜನರಿಗಿದೆ. ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಕಾಡದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಮಳೆಗಾಲದಲ್ಲಿ ಕಣ್ಣಿನ ಸಮಸ್ಯೆ ಕೂಡ ಹೆಚ್ಚು. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಂಜಂಕ್ಟಿವಾ ಕಾಡುತ್ತದೆ. ಇದನ್ನು ಕಣ್ಣಿನ ಉರಿಯೂತ ಎನ್ನಬಹುದು. ಅಲರ್ಜಿ, ಬ್ಯಾಕ್ಟೀರಿಯಾ, ಸೋಂಕಿನಿಂದ ಕಣ್ಣಿನ ಉರಿ ಕಾಣಿಸಿಕೊಳ್ಳುತ್ತದೆ. ಋತು ಬದಲಾಗುವ ಸಮಯದಲ್ಲಿ ಇದು ಮನುಷ್ಯನನ್ನು ಕಾಡುತ್ತದೆ.

ಇದು ಹೆಚ್ಚು ಕಾಡುವುದಿಲ್ಲ. ನಾಲ್ಕರಿಂದ ಐದು ದಿನ ಸಕ್ರಿಯವಾಗಿರುತ್ತದೆ. ವೈರಲ್ ಕಾಂಜಂಕ್ಟಿವಾಟಿಸ್ ತುಂಬಾ ಅಪಾಯಕಾರಿ ಅಲ್ಲ. ಇದು ನಾಲ್ಕರಿಂದ ಏಳು ದಿನಗಳಲ್ಲಿ ಕಡಿಮೆಯಾಗುತ್ತದೆ. ಆದಾಗ್ಯೂ, ಅಲರ್ಜಿ ಮತ್ತು ಬ್ಯಾಕ್ಟೀರಿಯಾದ ಕಾಂಜಂಕ್ಟಿವಿಟಿಸ್ ಹೆಚ್ಚು ಅಪಾಯಕಾರಿ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಅದು ಕಣ್ಣುಗಳನ್ನು ವಿರೂಪಗೊಳಿಸುತ್ತದೆ. ಇದರಿಂದಾಗಿ ಕಣ್ಣುಗಳಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಗಳು ಮತ್ತಷ್ಟು ಹೆಚ್ಚಾಗುತ್ತವೆ. ಅದಕ್ಕಾಗಿಯೇ ಈ ಸಮಯದಲ್ಲಿ ಕಣ್ಣಿನ ಆರೈಕೆಗೆ ಹೆಚ್ಚಿನ ಗಮನ ನೀಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...