alex Certify ಇವುಗಳನ್ನು ಸೇವಿಸಿದ ತಕ್ಷಣ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವುಗಳನ್ನು ಸೇವಿಸಿದ ತಕ್ಷಣ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ

ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಉತ್ತಮ. ದೇಹಕ್ಕೆ ಸಾಕಷ್ಟು ನೀರಿನಾಂಶ ಬೇಕಾಗಿರುವುದರಿಂದ ಪ್ರತಿಯೊಬ್ಬರು ದಿನಕ್ಕೆ 6ರಿಂದ 10 ಲೋಟ ನೀರು ಕುಡಿಯಬೇಕು. ಆದರೆ ಇವುಗಳನ್ನು ಸೇವಿಸಿದಾಗ ಮಾತ್ರ ಅಪ್ಪಿತಪ್ಪಿಯೂ ನೀರನ್ನು ಸೇವಿಸಬೇಡಿ.

*ಹುರಿದ ಕಡಲೆಯನ್ನು ತಿಂದ ತಕ್ಷಣ ನೀರನ್ನು ಕುಡಿಯಬೇಡಿ. ನೀರನ್ನು ಕುಡಿದರೆ ಕಡಲೆ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ನೋವು ಶುರುವಾಗುತ್ತದೆ.

*ಪೇರಳೆ ಹಣ್ಣನ್ನು ಸೇವಿಸಿದ ತಕ್ಷಣ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಬಿಡುಗಡೆಯಾಗುತ್ತದೆ. ಬೀಜಗಳು ಸರಿಯಾಗಿ ಜೀರ್ಣವಾಗದೆ ಹೊಟ್ಟೆನೋವು ಕಾಣಸಿಕೊಳ್ಳುತ್ತದೆ.

*ಐಸ್ ಕ್ರೀಂ ತಿಂದ ತಕ್ಷಣ ನೀರು ಕುಡಿಯಬೇಡಿ. ಇದರಿಂದ ಹಲ್ಲುಗಳಲ್ಲಿ ನೋವು, ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಐಸ್ ಕ್ರೀಂ ತಿಂದ 10 ನಿಮಿಷದ ಬಳಿಕ ನೀರನ್ನು ಕುಡಿಯಿರಿ.

*ಚಹಾ-ಕಾಫಿ ಕುಡಿದ ತಕ್ಷಣ ನೀರನ್ನು ಕುಡಿಯಬೇಡಿ. ಇದರಿಂದ ಜೀರ್ಣಾಂಗ ವ್ಯವಸ್ಥೆ ನಿಧಾನವಾಗಿ ಸರಿಯಾಗಿ ಮಲ ವಿಸರ್ಜನೆ ಆಗುವುದಿಲ್ಲ.

*ಬಾಳೆಹಣ್ಣು, ಸಪೋಟಾ, ಸೇಬು, ಅನಾನಸ್, ದಾಳಿಂಬೆ ಇತ್ಯಾದಿ ಹಣ್ಣುಗಳನ್ನು ಸೇವಿಸಿದ ತಕ್ಷಣ ನೀರನ್ನು ಸೇವಿಸಬೇಡಿ. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ.

*ನೆಲಗಡಲೆ ಸೇವಿಸಿದ ಕೂಡಲೇ ನೀರು ಕುಡಿಯಬೇಡಿ. ಇದರಿಂದ ಕೆಮ್ಮಿನ ಸಮಸ್ಯೆ ಕಾಡುತ್ತದೆ.

* ಊಟ ಮಾಡಿದ ತಕ್ಷಣ ನೀರನ್ನು ಕುಡಿಯಬೇಡಿ. ಇದರಿಂದ ಜೀರ್ಣ ಕ್ರಿಯೆ ಸರಿಯಾಗಿ ಆಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...