ನೀವು ಪೇಟಿಎಂ ಬಳಕೆದಾರರಾ..? ಹಾಗಾದರೆ ಈ ಸುದ್ದಿ ಓದಲೇ ಬೇಕು. ನಿಮಗೆ ಹಣ ದ್ವಿಗುಣ ಮಾಡುವ ಮೆಸೇಜ್ ಅಥವಾ ಆ ರೀತಿಯ ಸಂದೇಶಗಳು ಏನಾದ್ರು ಬಂದಿದ್ರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಏಕೆಂದರೆ ಇದು ಆನ್ ಲೈನ್ ವಂಚನೆಯಾಗಿದೆ. ಈ ಸಂದೇಶವನ್ನು ನಂಬಿ ಅನೇಕ ಮಂದಿ ಮೋಸ ಹೋಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದಾರೆ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ. ಗ್ರಾಹಕರ ಹಣವನ್ನು ದ್ವಿಗುಣಗೊಳಿಸುವ ನಕಲಿ ಆಫರ್ ಗಳಂತ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಹಾಗಾಗಿ ಗ್ರಾಹಕರು ಎಚ್ಚರದಿಂದಿರಿ ಎಂದು ಟ್ವಿಟರ್ನಲ್ಲಿ ಹೇಳಿದ್ದಾರೆ.
ಹೊಸ ಹಗರಣದ ಬಗ್ಗೆ ಬಳಕೆದಾರರಿಗೆ ತಿಳಿಸಿರುವ ಅವರು, ಗ್ರಾಹಕರು ತುಂಬಾ ಎಚ್ಚರದಿಂದಿರಬೇಕು ಎಂದು ಒಂದಿಷ್ಟು ಸ್ಕ್ರೀನ್ ಶಾಟ್ಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದಾರೆ. ಆನ್ಲೈನ್ ಹಗರಣಗಳು ಮೊದಲೇನಲ್ಲ. ಈ ಹಿಂದೆಯೂ ನಡೆದಿವೆ ಹಾಗಾಗಿ ಬೇರೆಯವರ ಮಾತು ನಂಬಿ ನಿಮ್ಮ ಹಣ ಕಳೆದುಕೊಳ್ಳಬೇಡಿ ಎಂದಿದ್ದಾರೆ.