alex Certify ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರದಿಂದ ʼಸಿಹಿ ಸುದ್ದಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರದಿಂದ ʼಸಿಹಿ ಸುದ್ದಿʼ

ನವದೆಹಲಿ: ಆರ್ಥಿಕತೆಗೆ ಉತ್ತೇಜನ ನೀಡಲು20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು, ಈ ಕುರಿತಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಆದಾಯ ತೆರಿಗೆ ಪಾವತಿದಾರರಿಗೆ ಸಿಹಿಸುದ್ದಿ ನೀಡಲಾಗಿದ್ದು, ಎಲ್ಲ ರೀತಿಯ ಆದಾಯ ತೆರಿಗೆ ಪಾವತಿಗಳ ಅಂತಿಮ ದಿನಾಂಕವನ್ನು ನವಂಬರ್ ವರೆಗೆ ವಿಸ್ತರಣೆ ಮಾಡಲಾಗಿದೆ.

ಅದೇ ರೀತಿ 2021 ರ ಮಾರ್ಚ್ 31 ರವರೆಗೆ ಸಲ್ಲಿಸಬೇಕಾದ ವೇತನ ರಹಿತ ಪಾವತಿಗಳ ಟಿಡಿಎಸ್ ಮತ್ತು ಟಿಸಿಎಸ್ ದರಗಳಲ್ಲಿ ಶೇಕಡ 25 ರಷ್ಟು ಕಡಿತ ಮಾಡಲಾಗಿದೆ. ಸರ್ಕಾರದ ಈ ಕ್ರಮದಿಂದಾಗಿ ಬೊಕ್ಕಸಕ್ಕೆ ಬರಬೇಕಿದ್ದ 50 ಸಾವಿರ ಕೋಟಿ ರೂಪಾಯಿ ಜನರಲ್ಲಿಯೇ ಉಳಿಯಲಿದೆ. ಈ ರೀತಿ ಉಳಿಕೆಯಾದ ಹಣ ಮಾರುಕಟ್ಟೆಯಲ್ಲಿ ಚಲಾವಣೆಗೆ ಬರಲಿದೆ ಎನ್ನುವುದು ಕೇಂದ್ರದ ಆಶಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...