ನವದೆಹಲಿ: ಆರ್ಥಿಕತೆಗೆ ಉತ್ತೇಜನ ನೀಡಲು20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು, ಈ ಕುರಿತಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಆದಾಯ ತೆರಿಗೆ ಪಾವತಿದಾರರಿಗೆ ಸಿಹಿಸುದ್ದಿ ನೀಡಲಾಗಿದ್ದು, ಎಲ್ಲ ರೀತಿಯ ಆದಾಯ ತೆರಿಗೆ ಪಾವತಿಗಳ ಅಂತಿಮ ದಿನಾಂಕವನ್ನು ನವಂಬರ್ ವರೆಗೆ ವಿಸ್ತರಣೆ ಮಾಡಲಾಗಿದೆ.
ಅದೇ ರೀತಿ 2021 ರ ಮಾರ್ಚ್ 31 ರವರೆಗೆ ಸಲ್ಲಿಸಬೇಕಾದ ವೇತನ ರಹಿತ ಪಾವತಿಗಳ ಟಿಡಿಎಸ್ ಮತ್ತು ಟಿಸಿಎಸ್ ದರಗಳಲ್ಲಿ ಶೇಕಡ 25 ರಷ್ಟು ಕಡಿತ ಮಾಡಲಾಗಿದೆ. ಸರ್ಕಾರದ ಈ ಕ್ರಮದಿಂದಾಗಿ ಬೊಕ್ಕಸಕ್ಕೆ ಬರಬೇಕಿದ್ದ 50 ಸಾವಿರ ಕೋಟಿ ರೂಪಾಯಿ ಜನರಲ್ಲಿಯೇ ಉಳಿಯಲಿದೆ. ಈ ರೀತಿ ಉಳಿಕೆಯಾದ ಹಣ ಮಾರುಕಟ್ಟೆಯಲ್ಲಿ ಚಲಾವಣೆಗೆ ಬರಲಿದೆ ಎನ್ನುವುದು ಕೇಂದ್ರದ ಆಶಯವಾಗಿದೆ.