ನವದೆಹಲಿ: ಕಂಪನಿ ಕಾನೂನುಗಳಲ್ಲಿ ಬದಲಾವಣೆ ತರಲಾಗಿದ್ದು, ಕಂಪನಿ ಕಾಯ್ದೆಯನ್ನು ಅಪರಾಧ ಮುಕ್ತ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಎಂಎಸ್ಎಂಇಗಳು ದಿವಾಳಿಯಾಗಿದೆ ಎಂದು ಘೋಷಿಸಲು ಇದ್ದ ಮಿತಿಯನ್ನು ಒಂದು ವರ್ಷ ಮುಂದೂಡಿಕೆ ಮಾಡಲಾಗಿದೆ. ಎಂಎಸ್ಎಂಇಗಳು ದಿವಾಳಿಯಾಗಿದೆ ಎಂದು ಇದ್ದ ಮಿತಿಯನ್ನು ಒಂದು ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಸಣ್ಣ, ಮಧ್ಯಮ ಕೈಗಾರಿಕೆಗಳು ಒಂದು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡರೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ಈ ಮೊದಲು ಒಂದು ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡರೂ ಕ್ರಮ ಕೈಗೊಳ್ಳಲಾಗುತ್ತಿತ್ತು. ಲಾಕ್ಡೌನ್ ನಿಂದಾಗಿ ಸಾಲ ಮರುಪಾವತಿ ಮಾಡದವರು ಸುಸ್ತಿದಾರರಲ್ಲ ಎಂದು ಹೇಳಲಾಗಿದೆ.
7 ಕಂಪನಿ ಅಪರಾಧಗಳನ್ನು ಅಪರಾಧಗಳೆಂದು ಪರಿಗಣಿಸಲಾಗುವುದಿಲ್ಲ. ಕಂಪನಿ ಕಾನೂನಿನಲ್ಲಿ ಬದಲಾವಣೆ ತರಲಾಗಿದೆ. ಅಪರಾಧಗಳ ವಿಚಾರಣೆಯಲ್ಲಿ ಬದಲಾವಣೆ ಮಾಡಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮತ್ತಷ್ಟು ನೆರವು ನೀಡಲಾಗಿದೆ. ಸಾಲ ಮರುಪಾವತಿಗೆ ಒಂದು ವರ್ಷ ಕಾಲಾವಕಾಶ ನೀಡಿದ್ದು ವಿದೇಶಿ ಷೇರು ಮಾರ್ಕೆಟ್ ನಲ್ಲಿ ಭಾರತೀಯ ಕಂಪನಿಗಳ ನೋಂದಣಿಗೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.