ನವದೆಹಲಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಎಂಎಸ್ಎಂಇ ಗಳಿಗೆ 20 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಣೆ ಮಾಡಲಾಗಿದೆ. ಕಡಿಮೆ ಅವಧಿ ಬೆಳೆ ಸಾಲಕ್ಕೆ ಶೇಕಡ 2 ರಷ್ಟು ಬಡ್ಡಿ ಇರಲಿದ್ದು, ಬೆಳೆ ಸಾಲ ಮರುಪಾವತಿ ಅವಧಿ ಆಗಸ್ಟ್ 31ರ ವರೆಗೆ ವಿಸ್ತರಣೆ ಮಾಡಲಾಗಿದೆ.
ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಅಲ್ಪಾವಧಿ ಬೆಳೆ ಸಾಲದ ಮರುಪಾವತಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. 2020 ರ ಮಾರ್ಚ್ ನಿಂದ ಆಗಸ್ಟ್ 31 ರ ವರೆಗೆ ಅವಕಾಶ ನೀಡಿದ್ದು, ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗಿದೆ. 14 ಬೆಳೆಗಳಿಗೆ ಹೊಸ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ. ಜೋಳ, ಗೋಧಿ, ಸಜ್ಜೆ, ತೊಗರಿಗೆ ಬೆಂಬಲ ಬೆಲೆ ಘೋಷಣೆ ಮಾಡಲಾಗಿದ್ದು, ವೆಚ್ಚದ ಮೇಲೆ ಶೇಕಡ 50 ರಷ್ಟು ಲಾಭ ಸಿಗುವಂತೆ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ.
ಕಷ್ಟದಲ್ಲಿರುವ ಉದ್ಯಮಗಳನ್ನು ಸುಧಾರಿಸಲು ವಿಶೇಷ ನಿಧಿ ಸ್ಥಾಪಿಸಲಾಗಿದೆ. ಕಷ್ಟದಲ್ಲಿರುವ 25 ಲಕ್ಷ ಉದ್ಯಮಗಳನ್ನು ಮೇಲೆತ್ತುವ ಗುರಿ ಹೊಂದಲಾಗಿದ್ದು 4000 ಕೋಟಿ ರೂಪಾಯಿ ವಿಶೇಷ ನಿಧಿ ಘೋಷಣೆ ಮಾಡಲಾಗಿದೆ. 20 ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೇಜನ್ನು ಸಣ್ಣ ಕೈಗಾರಿಕೆಗಳಿಗೆ ನೀಡಲಾಗಿದೆ ಎಂದು ಹೇಳಲಾಗಿದೆ.