ನವದೆಹಲಿ: ಸಣ್ಣ ವ್ಯಾಪಾರಸ್ಥರಿಗೆ ಪ್ರಧಾನಿ ಮೋದಿ ಸಿಹಿ ಸುದ್ದಿ ನೀಡಲಿದ್ದಾರೆ. ಬೀದಿಬದಿ ವ್ಯಾಪಾರಿಗಳು, ಹೂವು -ಹಣ್ಣು ಮಾರುವವರು ದೇಶದ ಬಡ ಸೋದರ, ಸೋದರಿಯರಿಗೆ ಮೋದಿ ಸಹಾಯ ಹಸ್ತ ಚಾಚಲಿದ್ದಾರೆ.
ಲಾಕ್ ಡೌನ್ ಬಸವಳಿದಿರುವ ಮಧ್ಯಮವರ್ಗಕ್ಕೆ ಬಲ ನೀಡಲಿದ್ದಾರೆ. ಈಗಾಗಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಸಣ್ಣ ಕೈಗಾರಿಕೆಗಳು ಸೇರಿದಂತೆ ಹಲವು ವಲಯಗಳಿಗೆ ಕೊಡುಗೆ ನೀಡಲಾಗಿದೆ. ಅದೇ ರೀತಿ ಬೀದಿ ಬದಿ ವ್ಯಾಪಾರಿಗಳು, ಹಣ್ಣು ಮಾರಾಟಗಾರರು, ಮಧ್ಯಮವರ್ಗಕ್ಕೆ ಕೊಡುಗೆ ನೀಡಬಹುದು ಎಂದು ಹೇಳಲಾಗಿದೆ.
ಎರಡು ದಿನಗಳ ಹಿಂದೆ ಪ್ಯಾಕೇಜ್ ಬಗ್ಗೆ ಘೋಷಣೆ ಮಾಡಿದ ಮೋದಿ, ರೈತರು, ಬಾಳೆಹಣ್ಣು ಮಾರುವವರು, ಮಧ್ಯಮವರ್ಗದವರು, ಬಡವರ ಬಗ್ಗೆ ಪ್ರಸ್ತಾಪಿಸಿ ನೆರವು ನೀಡುವುದಾಗಿ ಹೇಳಿದ್ದಾರೆ. ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ಯಾಕೇಜ್ ವಿವರ ನೀಡಿದ್ದಾರೆ. ಇದರ ಮುಂದುವರೆದ ಭಾಗವಾಗಿ ಸಣ್ಣ ವ್ಯಾಪಾರಸ್ಥರಿಗೆ, ಮಧ್ಯಮ ವರ್ಗದವರು, ರೈತರಿಗೆ ಕೊಡುಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.