alex Certify ಆತ್ಮ ನಿರ್ಭರ ಭಾರತದ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮ ನಿರ್ಭರ ಭಾರತದ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ

ಆತ್ಮನಿರ್ಭರ್ ಭಾರತವನ್ನ ಗಮನದಲ್ಲಿ ಇಟ್ಟುಕೊಂಡು ದೇಶದ ಮ್ಯಾಪಿಂಗ್​ ನೀತಿಯಲ್ಲಿ ಕೇಂದ್ರ ಸರ್ಕಾರ ಹಲವಾರು ಬದಲಾವಣೆಗಳನ್ನ ಮಾಡಿದೆ. ಇದರಿಂದ ಭಾರತೀಯ ಕಂಪನಿಗಳಿಗೆ ಹೆಚ್ಚು ಲಾಭವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇನ್ನು ಇದೇ ವಿಚಾರವಾಗಿ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ. ಭಾರತವನ್ನ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಯಿಂದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಬರೆದುಕೊಂಡಿದ್ದಾರೆ .

ನಮ್ಮ ಸರ್ಕಾರ ಡಿಜಿಟಲ್​ ಇಂಡಿಯಾವನ್ನ ಉತ್ತೇಜಿಸುವ ಸಲುವಾಗಿ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ. ಭೂ ಸ್ಥಾನಿಕ ಡೇಟಾದ ಸ್ವಾಧೀನ ಹಾಗೂ ಉತ್ಪಾದನೆಯನ್ನ ನಿಯಂತ್ರಿಸುವ ನೀತಿಗಳನ್ನ ಉದಾರೀಕರಣಗೊಳಿಸೋದು ಆತ್ಮ ನಿರ್ಭರ್​ ಭಾರತ್​ ದೃಷ್ಟಿಯಿಂದ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಟ್ವೀಟಾಯಿಸಿದ್ದಾರೆ.

ನಾವು ನಮ್ಮ ಸ್ಟಾರ್ಟ್​ ಅಪ್​ ಹಾಗೂ ಮ್ಯಾಪಿಂಗ್​ ಇನೋವೇಟರ್ಸ್​ಗಳ ಮೇಲೆ ನಂಬಿಕೆ ಇಡಲಿದ್ದೇವೆ. ಇದರಿಂದ ದೇಶದಲ್ಲಿ ಅಪಾರ ಅವಕಾಶಗಳು ಜನತೆಗೆ ಸಿಗಲಿದೆ. ಇದರಿಂದ ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿವೆ ಮಾತ್ರವಲ್ಲದೇ ದೇಶದಲ್ಲಿ ಆರ್ಥಿಕತೆಯೂ ಉತ್ತಮ ಬೆಳವಣಿಗೆ ಕಾಣಲಿದೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಅಲ್ಲದೇ ಭೂ ಸ್ಥಾನಿಕ ಡೇಟಾ ಹಾಗೂ ರಿಮೋಟ್​ ಸೆನ್ಸಿಂಗ್​ ಡೇಟಾ ಸಾಮರ್ಥ್ಯ ಹೆಚ್ಚಿಸೋದ್ರಿಂದ ದೇಶದ ರೈತರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ ಎಂದೂ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.

— Narendra Modi (@narendramodi) February 15, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...