ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಭಾರತದಲ್ಲೂ ತನ್ನ ಆರ್ಭಟ ನಡೆಸುತ್ತಿದೆ. ಈ ಮಹಾಮಾರಿಗೆ ಈವರೆಗೆ 2,408 ಮಂದಿ ಬಲಿಯಾಗಿದ್ದು, 73,981 ಮಂದಿ ಸೋಂಕು ಪೀಡಿತರಾಗಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದು, ಇದರ ಪರಿಣಾಮವಾಗಿ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ.
ಇದೀಗ ಕೇಂದ್ರ ಸರ್ಕಾರ ವಿದೇಶಿ ಹೂಡಿಕೆ ಹರಿದು ಬರುವಂತೆ ಮಾಡಲು ಮುಂದಾಗಿದ್ದು, ಹೂಡಿಕೆ ಆಕರ್ಷಿಸುವ ಕಂಪನಿಗಳಿಗೆ ತೆರಿಗೆ ವಿನಾಯಿತಿ (ಟ್ಯಾಕ್ಸ್ ಹಾಲಿಡೇ) ನೀಡುವ ಪ್ರಸ್ತಾವನೆಯನ್ನು ವಾಣಿಜ್ಯ ಸಚಿವಾಲಯ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿದೆ.