ನವದೆಹಲಿ: ಬೆಳೆಸಾಲ ಪಡೆದುಕೊಂಡ ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಹೊರಡಿಸಿದ ಅಧಿಸೂಚನೆಯಲ್ಲಿ ಅಲ್ಪಾವಧಿಯ ಸಾಲದ ಬಡ್ಡಿಗೆ ಎರಡು ಲಕ್ಷ ರೂಪಾಯಿಗಳವರೆಗೆ ಶೇಕಡ 2 ರಷ್ಟು ವಿನಾಯಿತಿ ಮತ್ತು ಪಿ.ಆರ್.ಐ.ಗೆ ಶೇಕಡ 3 ರಷ್ಟು ಪ್ರೋತ್ಸಾಹ ಮುಂದುವರೆಸಲು ತಿಳಿಸಲಾಗಿದೆ.
ಲಾಕ್ ಡೌನ್ ಜಾರಿಯಾಗಿ ರೈತರು ಸಂಕಷ್ಟದಲ್ಲಿರುವುದರಿಂದ ಕೊಯ್ಲು, ಮಾರಾಟ ಸೇರಿ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ಬೆಳೆ ಸಾಲದ ಬಡ್ಡಿಗೆ ಶೇಕಡ 2 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೇಳಲಾಗಿದೆ.