ರೈತರಿಗೆ ಅನುಕೂಲವಾಗುವಂತೆ 3 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಹೇಳಲಾಗಿದೆ. ಆದರೆ, ರೈತರು ಕೃಷಿ ಸಾಲದಲ್ಲಿ ಶೂನ್ಯ ಬಡ್ಡಿದರ ಸೌಲಭ್ಯವನ್ನು ಪಡೆಯಲು ಮೇ 31 ರೊಳಗೆ ಸಾಲವನ್ನು ಮರುಪಾವತಿ ಮಾಡಬೇಕಿದೆ. ಮೇ 31 ರೊಳಗೆ ಸಾಲ ಕಟ್ಟದಿದ್ದರೆ ಶೂನ್ಯ ಬಡ್ಡಿದರ ಸೌಲಭ್ಯ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೂನ್ 30ರ ವರೆಗೂ ಸಾಲದ ಮರುಪಾವತಿ ಅವಧಿ ವಿಸ್ತರಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಯಾವುದೇ ಅಧಿಸೂಚನೆ ಇನ್ನು ಬಂದಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಪಡೆದುಕೊಳ್ಳಲು ಮೇ 31 ರೊಳಗೆ ಕೃಷಿ ಸಾಲ ಮರು ಪಾವತಿ ಮಾಡಬೇಕೆಂದು ಸಹಕಾರ ಬ್ಯಾಂಕುಗಳಿಗೆ ತಿಳಿಸಲಾಗಿದೆ. ಲಾಕ್ಡೌನ್ ಸಂಕಷ್ಟದಲ್ಲಿರುವ ರೈತರು ಕೃಷಿ ಸಾಲ ಪಾವತಿ ಮಾಡಿಲ್ಲ. ಈಗ ಮೇ 31 ರೊಳಗೆ ಸಾಲ ಮರುಪಾವತಿ ಮಾಡಬೇಕಿದೆ. ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ರೈತರಿಗೆ ಮೂರು ಲಕ್ಷ ರೂಪಾಯಿವರೆಗಿನ ಕೃಷಿ ಸಾಲ ಬಡ್ಡಿಯಲ್ಲಿ ಶೇಕಡ 2 ರಷ್ಟು ಸಬ್ಸಿಡಿ ನೀಡಲಿದ್ದು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿದವರಿಗೆ ಶೇಕಡ 3 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಇದನ್ನು ಪಡೆಯಲು ಮೇ 31 ರೊಳಗೆ ಸಾಲ ಪಾವತಿಸಬೇಕಿದೆ. ಈ ಅವಧಿಯನ್ನು ಮತ್ತಷ್ಟು ವಿಸ್ತರಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.