ರಾಜಸ್ಥಾನದ ಜೈಪುರದ ರಾಮ್ ನಗರದಲ್ಲಿರುವ ಚಿನ್ನಾಭರಣ ವ್ಯಾಪಾರಿ ಈಗ ತರಕಾರಿ ಮಾರಾಟ ಮಾಡತೊಡಗಿದ್ದಾರೆ. ಅವರ ಬದುಕು ಹೀಗೆ ಬದಲಾಗಲು ಕಾರಣ ಲಾಕ್ ಡೌನ್.
ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿದ್ದರಿಂದ ವ್ಯಾಪಾರ-ವಹಿವಾಟು ಇಲ್ಲದೆ ಚಿನ್ನಾಭರಣ ವ್ಯಾಪಾರಿ ಹುಕುಮ್ ಚಾಂದ್ ಸೋನಿ ತರಕಾರಿ ಮಾರಾಟ ಮಾಡತೊಡಗಿದ್ದಾರೆ. ಅಷ್ಟೇನೂ ಶ್ರೀಮಂತ ವ್ಯಾಪಾರಿಯಲ್ಲದ ಹುಕುಮ್ ಚಾಂದ್ ಜೈಪುರದ ರಾಮ್ ನಗರದಲ್ಲಿ ಚಿನ್ನಾಭರಣ ಮಳಿಗೆ ಹೊಂದಿದ್ದಾರೆ.
ಲಾಕ್ ಡೌನ್ ಆರಂಭದ ದಿನಗಳಲ್ಲಿ ಜೀವನ ನಡೆಸಲು ತೊಂದರೆಯೇನೂ ಆಗಿಲ್ಲ. ಆದರೆ ಲಾಕ್ ಡೌನ್ ಮುಂದುವರೆದಂತೆ ಕುಟುಂಬ ನಿರ್ವಹಣೆ ಕಷ್ಟವಾಗಿದ್ದರಿಂದ ಜೀವನ ನಡೆಸಲು ತರಕಾರಿ ಮಾರಾಟ ಮಾಡತೊಡಗಿದ್ದಾರೆ.
ಚಿನ್ನಾಭರಣಗಳ ಅಂಗಡಿ ಈಗ ತರಕಾರಿ ಅಂಗಡಿಯಾಗಿ ಬದಲಾಗಿದೆ. ಚಿನ್ನ ತೂಗುತ್ತಿದ್ದ ಕೈಯಲ್ಲಿ ಹುಕುಮ್ ಚಾಂದ್ ತರಕಾರಿ ತಕ್ಕಡಿ ಹಿಡಿದು ತೂಕ ಮಾಡುತ್ತಿದ್ದಾರೆ. ಲಾಕ್ಡೌನ್ ಗಿಂತ ಮೊದಲು ಚಿನ್ನಾಭರಣ ಚಿನ್ನ ತೂಗುತ್ತಿದ್ದ ತಕ್ಕಡಿಯಲ್ಲಿ ಈಗ ತರಕಾರಿ ತೂಕ ಹಾಕಲಾಗುತ್ತಿದೆ.
ನಾನು ಸಣ್ಣ ವ್ಯಾಪಾರಿಯಾಗಿದ್ದು, ಜಾಸ್ತಿ ಹಣ ಸಂಗ್ರಹಿಸಿ ಇಟ್ಟುಕೊಂಡಿಲ್ಲ. ಜೀವನ ನಡೆಸಲು ತರಕಾರಿ ಮಾರಾಟ ಮಾಡುತ್ತಿದ್ದೇನೆ ಎಂದು ಹುಕುಮ್ ಚಾಂದ್ ತಿಳಿಸಿದ್ದಾರೆ.