alex Certify ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಿದ್ರೆ ಸಂಪತ್ತು ವೃದ್ಧಿ: ಗ್ರಾಹಕರಿಗೆ ಇಲ್ಲಿದೆ ‘ಶುಭ ಸುದ್ದಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಿದ್ರೆ ಸಂಪತ್ತು ವೃದ್ಧಿ: ಗ್ರಾಹಕರಿಗೆ ಇಲ್ಲಿದೆ ‘ಶುಭ ಸುದ್ದಿ’

ಬೆಂಗಳೂರು: ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಐಶ್ವರ್ಯ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಗೆ ಜನ ಹೆಚ್ಚಿನ ಆಸಕ್ತಿ ತೋರುತ್ತಾರೆ. ಆದರೆ ಈ ಬಾರಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಚಿನ್ನ ಖರೀದಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಇಲ್ಲಿದೆ.

ಲಾಕ್ ಡೌನ್ ನಡುವೆಯೂ ಅಕ್ಷಯ ತೃತೀಯ ಆಚರಣೆಗೆ ಚಿನ್ನ ಮಾರಾಟ ಮಳಿಗೆಗಳು ಸಿದ್ಧತೆ ನಡೆಸಿದ್ದು ಗ್ರಾಹಕರ ಮನೆ ಬಾಗಿಲಿಗೆ ಚಿನ್ನ ತಲುಪಿಸಲು ಯೋಜನೆ ರೂಪಿಸಿವೆ. ಏಪ್ರಿಲ್ 26 ರಂದು ಬಸವ ಜಯಂತಿ ಮತ್ತು ಅಕ್ಷಯ ತೃತೀಯ ದಿನವಾಗಿದ್ದು ಗ್ರಾಹಕರು ಆನ್ಲೈನ್ನಲ್ಲಿ ಚಿನ್ನ ಖರೀದಿಸುವ ಆಯ್ಕೆ ಕಲ್ಪಿಸಲಾಗಿದೆ.

ಗ್ರಾಹಕರು ತಮಗೆ ಇಷ್ಟವಾದ ಚಿನ್ನಾಭರಣಗಳನ್ನು ಬುಕ್ ಮಾಡಬಹುದು. ಲಾಕ್ಡೌನ್ ಮುಗಿದ ನಂತರ ಆಭರಣಗಳನ್ನು ಡಿಲೆವರಿ ಪಡೆಯಬಹುದಾಗಿದೆ. ಆನ್ಲೈನ್ ಮೂಲಕವೇ ಹಣ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಕೆಲವು ರಿಯಾಯಿತಿಗಳನ್ನು ಕೂಡ ನೀಡಲಾಗಿದೆ. ಗ್ರಾಹಕರು ತಾವು ಖರೀದಿಸಿದ ಆಭರಣಗಳನ್ನು ಲಾಕ್ಡೌನ್ ನಿರ್ಬಂಧ ಸಡಿಲವಾದ ಬಳಿಕ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...