ದೇಶದಲ್ಲಿ ಈ ಮೊದಲೇ ಆರ್ಥಿಕ ಹಿಂಜರಿತ ಕಂಡುಬಂದಿದ್ದು, ಈಗ ವಕ್ಕರಿಸಿರುವ ಕೊರೊನಾ ಮಹಾಮಾರಿ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಆರ್ಥಿಕತೆಯನ್ನು ಸರಿದೂಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಆರ್ಥಿಕತೆ ಚೇತರಿಕೆಗಾಗಿ ಬಹಳಷ್ಟು ಸಮಯ ಬೇಕಾಗುತ್ತದೆ.
ಇದರ ಮಧ್ಯೆ ಬ್ಯಾಂಕ್ ಬಡ್ಡಿ ದರವನ್ನು ಇಳಿಕೆ ಮಾಡಿದ್ದರ ಪರಿಣಾಮ ಆಪತ್ಕಾಲಕ್ಕೆಂದು ಠೇವಣಿ ಇಟ್ಟಿದ್ದ ಹಿರಿಯ ನಾಗರಿಕರಿಗೆ ಸಮಸ್ಯೆಯಾಗಿತ್ತು. ಬ್ಯಾಂಕಿನಿಂದ ಬರುವ ಬಡ್ಡಿಯ ಮೇಲೆ ಜೀವನ ನಿರ್ವಹಿಸುವವರಿಗೆ ಆತಂಕವಾಗಿತ್ತು.
ಇದೀಗ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಹಿರಿಯ ನಾಗರಿಕರಿಗೆ ನೆರವಾಗುವ ಪ್ರಧಾನಮಂತ್ರಿ ವಯೋ ವಂದನಾ ಪಿಂಚಣಿ ಯೋಜನೆಯನ್ನು 2023 ರ ಮಾರ್ಚ್ 31ರ ತನಕ ವಿಸ್ತರಿಸಲಾಗಿದೆ. ಇದರಿಂದಾಗಿ ಹಿರಿಯ ನಾಗರಿಕರು ಹೂಡಿಕೆ ಮೂಲಕ ಹೆಚ್ಚಿನ ಬಡ್ಡಿ ಆದಾಯ ಗಳಿಸಬಹುದಾಗಿದೆ.