alex Certify ಶೋರೂಮ್ ನಲ್ಲಿ ಅಪಮಾನ ಪ್ರಕರಣ, ರೈತನಿಗೆ ವಾಹನ ತಲುಪಿಸಿದ ‘ಮಹೀಂದ್ರಾ’ ಟ್ವೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೋರೂಮ್ ನಲ್ಲಿ ಅಪಮಾನ ಪ್ರಕರಣ, ರೈತನಿಗೆ ವಾಹನ ತಲುಪಿಸಿದ ‘ಮಹೀಂದ್ರಾ’ ಟ್ವೀಟ್

ಮಹೀಂದ್ರಾ ಶೋರೂಮ್ ನಲ್ಲಿ ರೈತನಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ರೈತನ ಮನೆಗೆ ಮಹಿಂದ್ರಾ ಗೂಡ್ಸ್ ವಾಹನ ಬಂದಿದೆ.

ನಿನ್ನೆ ರೈತ ಕೆಂಪೇಗೌಡರಿಗೆ ವಾಹನ ಡೆಲಿವರಿ ಮಾಡಲಾಗಿದೆ. ಈ ಕುರಿತಾಗಿ ಆನಂದ್ ಮಹಿಂದ್ರಾ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ತುಮಕೂರಿನಲ್ಲಿರುವ ಮಹೀಂದ್ರಾ ಡೀಲರ್‌ಗಳ ಶೋರೂಂ ಒಂದರಲ್ಲಿ ನಡೆದ ಘಟನೆಯ ಬಳಿಕ ವಾಹನ ಡೆಲಿವರಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಜ.21 ರಂದು ಮಹಿಂದ್ರಾ ಡೀಲರ್‌ ಶಿಪ್‌ಗೆ ಭೇಟಿ ನೀಡಿದಾಗ ಕೆಂಪೇಗೌಡ ಮತ್ತು ಅವರ ಸ್ನೇಹಿತರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ನಾವು ನೀಡಿದ ಭರವಸೆಯಂತೆ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸಮಸ್ಯೆಯನ್ನು ಈಗ ಪರಿಹರಿಸಲಾಗಿದೆ. ಕೆಂಪೇಗೌಡರಿಗೆ ಧನ್ಯವಾದಗಳು ನಾವು ಅವರನ್ನು ಮಹೀಂದ್ರಾ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...