ಕಿಸಾನ್ ಕ್ರೆಡಿಟ್ ಕಾರ್ಡ್ನ ಮಿತಿಯನ್ನು ದ್ವಿಗುಣಗೊಳಿಸುವ ಮೂಲಕ ಬಡ್ಡಿ ಕಡಿಮೆ ಮಾಡುವ ಒತ್ತಾಯ ಕೇಳಿ ಬಂದಿದೆ. ಲಾಕ್ ಡೌನ್ ನಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಕಿಸಾನ್ ಶಕ್ತಿ ಸಂಘ ಅಧ್ಯಕ್ಷ ಪುಷ್ಪೇಂದ್ರ ಸಿಂಗ್ ಈ ಬೇಡಿಕೆ ಮುಂದಿಟ್ಟಿದ್ದಾರೆ.
ಸದ್ಯ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ 3 ಲಕ್ಷ ರೂಪಾಯಿ. ಸಮಯಕ್ಕೆ ಸರಿಯಾಗಿ ಹಣ ವಾಪಸ್ ಮಾಡದೆ ಹೋದಲ್ಲಿ ಶೇಕಡಾ 4ರಷ್ಟು ಬಡ್ಡಿ ವಸೂಲಿ ಮಾಡಲಾಗುತ್ತದೆ. ಇದ್ರ ಮಿತಿಯನ್ನು ಈಗ 6 ಲಕ್ಷ ಮಾಡಬೇಕು. ಹಾಗೆ ಬಡ್ಡಿಯನ್ನು ಶೇಕಡಾ 1ಕ್ಕೆ ಇಳಿಸಬೇಕೆಂದು ಪುಷ್ಪೇಂದ್ರ ಸಿಂಗ್ ಒತ್ತಾಯಿಸಿದ್ದಾರೆ.
ದೇಶದಲ್ಲಿ ಸುಮಾರು ಏಳು ಕೋಟಿ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸಿ ಬಡ್ಡಿ ಕಡಿಮೆ ಮಾಡಿದಲ್ಲಿ ದೇಶದ ಅರ್ಧದಷ್ಟು ರೈತರ ಸಂಕಷ್ಟ ದೂರವಾಗಲಿದೆ ಎಂದು ಅವ್ರು ಹೇಳಿದ್ದಾರೆ.