alex Certify ‘ಯುಗಾದಿ’ ಸಂದರ್ಭದಲ್ಲಿ ಜೋರಾಯ್ತು ಹೊಸ ವಾಹನ ಖರೀದಿ ಭರಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಯುಗಾದಿ’ ಸಂದರ್ಭದಲ್ಲಿ ಜೋರಾಯ್ತು ಹೊಸ ವಾಹನ ಖರೀದಿ ಭರಾಟೆ

ಭಾರತೀಯರು ಯುಗಾದಿಯನ್ನು ಹೊಸ ವರ್ಷವನ್ನಾಗಿ ಪರಿಗಣಿಸುತ್ತಾರೆ. ಇದೇ ಸಂದರ್ಭದಲ್ಲಿ ವಸಂತ ಋತುವಿನ ಆಗಮನವಾಗಲಿದ್ದು, ಗಿಡ ಮರಗಳು ಚಿಗುರೊಡೆದು ಹಸಿರಿನಿಂದ ಕಂಗೊಳಿಸುತ್ತವೆ. ಇದೀಗ ಯುಗಾದಿ ಸಮೀಪಿಸುತ್ತಿದ್ದು, ಹಬ್ಬದ ತಯಾರಿ ಜೋರಾಗಿ ನಡೆದಿದೆ.

ಯುಗಾದಿ ಸಂದರ್ಭದಲ್ಲಿ ಹೊಸ ವಾಹನ ಖರೀದಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆಯಿದ್ದು, ಹೀಗಾಗಿ ಹಲವರು ಕಾರು, ಬೈಕು, ಸ್ಕೂಟರ್ ಗಳ ಖರೀದಿಗಾಗಿ ತಯಾರಿ ನಡೆಸಿದ್ದಾರೆ. ಯಾವ ವಾಹನ ಖರೀದಿಸಬೇಕೆಂಬುದರ ಕುರಿತು ಸಂಬಂಧಿಗಳು, ಸ್ನೇಹಿತರ ಜೊತೆ ಚರ್ಚೆ ನಡೆಸುತ್ತಿದ್ದಾರೆ.

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್: RTE ಅರ್ಜಿ ಸಲ್ಲಿಕೆ ವಿಸ್ತರಣೆ

ಇದಕ್ಕೆ ಪೂರಕವೆಂಬಂತೆ ವಾಹನ ಮಾರಾಟ ಉದ್ಯಮಗಳು ಯುಗಾದಿ ಡಿಸ್ಕೌಂಟ್ ಘೋಷಣೆ ಮಾಡತೊಡಗಿದ್ದು, ಕೆಲವೊಂದು ಕಂಪನಿಗಳು ಉಚಿತ ಇನ್ಶೂರೆನ್ಸ್ ಸೇರಿದಂತೆ ಹಲವು ಭರವಸೆಗಳನ್ನು ನೀಡುತ್ತಿವೆ. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿದ್ದರೂ ಸಹ ಹಬ್ಬದ ಸಂಭ್ರಮ ಕಡಿಮೆಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...