alex Certify ಪ್ರಧಾನಿ ಮೋದಿ ಚಾಲನೆ ನೀಡಿದ ‘ಸ್ವಾಮಿತ್ವ’ ಯೋಜನೆಯಿಂದ ರೈತರಿಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಚಾಲನೆ ನೀಡಿದ ‘ಸ್ವಾಮಿತ್ವ’ ಯೋಜನೆಯಿಂದ ರೈತರಿಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಗ್ರಾಮೀಣ ಕುಟುಂಬಗಳಿಗೆ ಆಸ್ತಿ ಹಕ್ಕಿನ ಕಾರ್ಡ್ ನೀಡುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಆದರೆ ಈ ಯೋಜನೆ ರೈತರಿಗೆ, ಹಳ್ಳಿಗಾಡಿನ ಜನರಿಗೆ ಹೇಗೆ ನೆರವಾಗುತ್ತದೆ ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ.

ಈ ಕಾರ್ಡ್ ಆಧಾರ್ ಕಾರ್ಡ್ ತರಹ ಇರುತ್ತದೆ. ಡಿಜಿಟಲ್ ಭಾರತದ ಭಾಗವಾಗಿ ರೂಪಿಸಲಾದ ಈ ಸ್ವಾಮಿತ್ವ ಕಾರ್ಡ್‌ನಲ್ಲಿಯೇ ತಮ್ಮ ಎಲ್ಲಾ ಆಸ್ತಿಗಳ ದಾಖಲೆಗಳು ಸಿಗಲಿವೆ. ಇದರಿಂದ ರೈತರಿಗೆ ತುಂಬಾ ಅನುಕೂಲ ಆಗಲಿದೆ. ಗ್ರಾಮೀಣ ಕುಟುಂಬಗಳು ಸಾಲ ಮತ್ತು ಇತರೆ ಹಣಕಾಸು ಸೌಲಭ್ಯ ಪಡೆಯಲು ಈ ಕಾರ್ಡನ್ನು ಬಳಸಬಹುದಾಗಿದೆ.

ಈ ಯೋಜನೆ ಯುವಕರಿಗೂ ಅನುಕೂಲ ಆಗಲಿದೆ. ತಾವು ಮಾಡುವ ಉದ್ಯೋಗಕ್ಕೆ ಸಾಲ ಪಡೆಯಲು ಸಾಧ್ಯವಾಗೋದಿಲ್ಲ ಅಥವಾ ತಮ್ಮ ಆಸ್ತಿ ಇದ್ದರೂ ಸಾಲ ಪಡೆಯುವುದು ಕಷ್ಟ ಎನ್ನುತ್ತಿದ್ದವರಿಗೆ ಈ ಯೋಜನೆ ನೆರವಾಗುತ್ತದೆ. ತಮ್ಮ ಆಸ್ತಿಗಳ ಮೇಲೆ ನೇರವಾಗಿ ಹಾಗೂ ಸುಲಭ ಮಾರ್ಗದಿಂದ ಸಾಲ ಪಡೆಯಬಹುದಾಗಿದೆ.

ದೇಶಾದ್ಯಂತ ಮೊದಲ ಹಂತದಲ್ಲಿ 6 ರಾಜ್ಯಗಳ 763 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಉತ್ತರ ಪ್ರದೇಶದ 346, ಹರ್ಯಾಣದ 221, ಮಹಾರಾಷ್ಟ್ರದ 100, ಉತ್ತರಾಖಂಡದ 50, ಮಧ್ಯಪ್ರದೇಶದ 44, ಕರ್ನಾಟಕದ 2 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ದೇಶದ ಎಲ್ಲಾ ಹಳ್ಳಿಯ ಜನರ ಕುಟುಂಬಗಳಿಗೆ ಈ ಯೋಜನೆ ವಿಸ್ತರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...