ಲಾಕ್ ಡೌನ್ ನಿಂದಾಗಿ ಇಡೀ ದೇಶದಲ್ಲಿ ಜನಜೀವನ ಸಂಪೂರ್ಣ ಸ್ತಬ್ಧವಾಗಿದ್ದು, ಅಂಗಡಿ-ಮುಂಗಟ್ಟುಗಳು ಸಹ ಮುಚ್ಚಿರುವ ಕಾರಣ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ.
ದೇಶದ ಜನತೆ ಕೂಡಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಇವರ ನೆರವಿಗಾಗಿ ಕೇಂದ್ರ ಸರ್ಕಾರ ಕೆಲ ಪ್ಯಾಕೇಜುಗಳನ್ನು ಘೋಷಿಸಿತ್ತು. ಇದರ ಜೊತೆಗೆ ಇಪಿಎಫ್ಒ ಪಿಂಚಣಿದಾರರು ಪಿಂಚಣಿಯ ಮೂರನೇ ಒಂದರಷ್ಟು ಭಾಗವನ್ನು ಮುಂಚಿತವಾಗಿ ಪಡೆಯುವ ಆಯ್ಕೆಯನ್ನು ನೀಡಿತ್ತು.
ಇದೀಗ ಈ ಆಯ್ಕೆ ಪಡೆದ ಪಿಂಚಣಿದಾರರಿಗೆ ಮುಂದಿನ ತಿಂಗಳಿನಿಂದ ವಿತರಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದರಿಂದ ಸರ್ಕಾರಕ್ಕೆ 1,500 ಕೋಟಿ ಹೊರೆ ಬೀಳಲಿದೆ ಎನ್ನಲಾಗಿದ್ದು, 6.30 ಲಕ್ಷ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.