ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಲಾಕ್ ಡೌನ್ ವೇಳೆ ಕಂಪನಿಗಳು ಉದ್ಯೋಗಿಗಳಿಗೆ ಪೂರ್ಣ ಸಂಬಳ ನೀಡಬೇಕೆಂಬ ಆದೇಶ ನೀಡಿತ್ತು. ಈ ಆದೇಶವನ್ನು ಈಗ ಹಿಂಪಡೆದಿದೆ. ಇದ್ರಿಂದ ಕಂಪನಿಗಳಿಗೆ ನೆಮ್ಮದಿ ಸಿಕ್ಕಿದೆ. ಆದ್ರೆ ಉದ್ಯೋಗಿಗಳಿಗೆ ಇದ್ರಿಂದ ಹಿನ್ನಡೆಯಾಗಿದೆ.
ಮಾರ್ಚ್ 29ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಲಾಕ್ ಡೌನ್ ವೇಳೆ ಎಲ್ಲ ಕಂಪನಿಗಳು ಬಾಗಿಲು ಮುಚ್ಚಿದ್ದರೂ ತಿಂಗಳ ಕೊನೆಯಲ್ಲಿ ಉದ್ಯೋಗಿಗಳಿಗೆ ಪೂರ್ಣ ಸಂಬಳ ನೀಡಬೇಕೆಂದು ಹೇಳಲಾಗಿತ್ತು. ಕರ್ನಾಟಕದ ಫಿಕಸ್ ಪ್ಯಾಕ್ಸ್ ಪ್ರೈವೇಟ್ ಲಿಮಿಟೆಡ್ ಕೇಂದ್ರದ ಈ ನಿರ್ಧಾರವನ್ನು ಪ್ರಶ್ನಿಸಿತ್ತು. ಇದ್ರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪೂರ್ಣ ಸಂಬಳ ನೀಡದ ಕಂಪನಿ ವಿರುದ್ಧ ಯಾವುದೇ ಕ್ರಮಕೈಗೊಳ್ಳಬಾರದು ಎಂದು ತೀರ್ಪು ನೀಡಿತ್ತು.
ಮೇ 17ರಂದು ಜಾರಿಗೆ ಬಂದ ಹೊಸ ಮಾರ್ಗಸೂಚಿಯಲ್ಲಿ ವೇತನವಿಲ್ಲದ ಕಾರಣ ಬಾಡಿಗೆ ನೀಡದಿರುವ ಕಾರ್ಮಿಕರನ್ನು ಮನೆಯಿಂದ ಹೊರಗೆ ಹಾಕಿದ್ರೆ ಆ ಮನೆ ಮಾಲೀಕನ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎನ್ನಲಾಗಿದೆ.