alex Certify BIG BREAKING: ಹಿರಿಯ ನಟ ವಿಕ್ರಮ್ ಗೋಖಲೆ ಸಾವಿನ ವದಂತಿ ತಳ್ಳಿಹಾಕಿದ ಕುಟುಂಬ ಸದಸ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಹಿರಿಯ ನಟ ವಿಕ್ರಮ್ ಗೋಖಲೆ ಸಾವಿನ ವದಂತಿ ತಳ್ಳಿಹಾಕಿದ ಕುಟುಂಬ ಸದಸ್ಯರು

ಮುಂಬೈ: ಹಿರಿಯ ನಟ ವಿಕ್ರಮ್ ಗೋಖಲೆ ಅವರ ಸಾವಿನ ವರದಿಗಳನ್ನು ಕುಟುಂಬದವರು ನಿರಾಕರಿಸಿದ್ದಾರೆ. ವಿಕ್ರಮ್ ಗೋಖಲೆ ಮೃತಪಟ್ಟಿರುವುದಾಗಿ ವದಂತಿ ಹರಡಿದ್ದು, ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಪೋಸ್ಟ್‌ ಗಳನ್ನು ಹಂಚಿಕೊಂಡಿದ್ದಾರೆ.

ವಿಕ್ರಮ್ ಗೋಖಲೆ ಅವರು ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 82 ವರ್ಷದ ನಟನನ್ನು ಕೆಲವು ದಿನಗಳ ಹಿಂದೆ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರು ಇನ್ನೂ ನಿಧನಹೊಂದಿಲ್ಲ. ಜೀವರಕ್ಷಕ ಸಾಧನಗಳೊಂದಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಿಗಾಗಿ ಪ್ರಾರ್ಥಿಸುತ್ತಾ ಇರಿ ಎಂದು ವಿಕ್ರಮ್ ಗೋಖಲೆ ಅವರ ಪುತ್ರಿ ಹೇಳಿದ್ದಾರೆ.

ಗೋಖಲೆಯವರ ಕುಟುಂಬದ ಸ್ನೇಹಿತ ಆನಂದ್ ದವೆ, ಈಗ ಅವರಿಗೆ ಕೆಲವು ವಿಶೇಷ ಔಷಧಗಳನ್ನು ನೀಡಲಾಗಿದೆ. ನಾಳೆ ಬೆಳಗ್ಗೆ ಸುಮಾರು 10 ಗಂಟೆಗೆ ಪುಣೆಯಲ್ಲಿರುವ ಅವರ ನಿವಾಸಕ್ಕೆ ಕರೆದೊಯ್ಯಲಾಗುತ್ತದೆ. ಗೋಖಲೆ ಅವರ ಇಬ್ಬರು ಪುತ್ರಿಯರು ಅವರ ಆರೋಗ್ಯದ ಬಗ್ಗೆ ವದಂತಿಗಳನ್ನು ಹರಡದಂತೆ ವಿನಂತಿಸಿದ್ದಾರೆ ಎಂದರು.

ಹಿರಿಯ ನಟನ ನಿಧನದ ಬಗ್ಗೆ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ವಿಕ್ರಮ್ ಗೋಖಲೆ ಅವರು ‘ಹಮ್ ದಿಲ್ ದೇ ಚುಕೆ ಸನಮ್’, ‘ಭೂಲ್ ಭುಲೈಯಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ನಟಿಸಿದ ‘ಪರ್ವಾನಾ’ ಮತ್ತು ‘ಖುದಾ ಗವಾ’ ಮುಂತಾದ ಚಿತ್ರಗಳಲ್ಲಿ ವಿಕ್ರಮ್ ತೆರೆಯ ಮೇಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಮರಾಠಿ ಚಲನಚಿತ್ರ ‘ಅನುಮತಿ’ಯಲ್ಲಿನ ಅಭಿನಯಕ್ಕಾಗಿ 2010 ರಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸಹ ಪಡೆದಿದ್ದಾರೆ.

ಗೋಖಲೆ ಅವರು ಮರಾಠಿ ರಂಗಭೂಮಿ ಮತ್ತು ಚಲನಚಿತ್ರ ನಟ ಚಂದ್ರಕಾಂತ್ ಗೋಖಲೆ ಅವರ ಪುತ್ರರಾಗಿದ್ದಾರೆ ಮತ್ತು ಪ್ರಾದೇಶಿಕ ಸಿನಿಮಾದಲ್ಲಿ ಅವರ ವೃತ್ತಿಜೀವನವನ್ನು ಅನುಸರಿಸಿ, ನಟ 2010 ರಲ್ಲಿ ‘ಆಘಾತ್’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ವರ್ಷದ ಜೂನ್‌ ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅಭಿಮನ್ಯು ದಸ್ಸಾನಿ ಮತ್ತು ಶಿಲ್ಪಾ ಶೆಟ್ಟಿ ಅಭಿನಯದ ‘ನಿಕಮ್ಮ್’ ಅವರ ಕೊನೆಯ ಚಿತ್ರವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...