alex Certify ಸೋನುಸೂದ್‌ಗೆ ಸಚಿವರಿಂದ ವೆಜ್ ಬಿರಿಯಾನಿ ಟ್ರೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನುಸೂದ್‌ಗೆ ಸಚಿವರಿಂದ ವೆಜ್ ಬಿರಿಯಾನಿ ಟ್ರೀಟ್

ಹೈದ್ರಾಬಾದ್‌ನ ಬಿರಿಯಾನಿ ವರ್ಲ್ಡ್ ಫೇಮಸ್ಸು. ಈಗ ಹೈದ್ರಾಬಾದ್‌ನ ‘ವೆಜ್ ಬಿರಿಯಾನಿ’ ನಟ ಸೋನುಸೂದ್ ಕಾರಣದಿಂದ ನೆಟ್ಟಿಗರ ಚರ್ಚೆಗೆ, ಟ್ರೋಲ್‌ಗೆ ಒಳಗಾಗಿದೆ.

ಇತ್ತೀಚೆಗೆ ತೆಲಂಗಾಣ ಸಿಎಂ‌ ಪುತ್ರ ಮತ್ತು ಸಚಿವ ಕೆ.ಟಿ. ರಾಮರಾವ್ ಅವರು ಸೋನುಸೂದ್ ಅವರನ್ನು ಸತ್ಕರಿಸಿದ್ದರು. ಇದಕ್ಕೆ ಪ್ರತಿಯಾಗಿ ಸೋನುಸೂದ್ ಟ್ವೀಟರ್‌ನಲ್ಲಿ ಕೃತಜ್ಞತೆ ಸಲ್ಲಿಸಿದ್ದರು. ಈ ವೇಳೆ “ದಿ ವರ್ಲ್ಡ್ಸ್ ಬೆಸ್ಟ್ ವೆಜ್ ಬಿರಿಯಾನಿ’ ಟ್ರೀಟ್ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಎಂದು ಸಚಿವರನ್ನು ಉದ್ದೇಶಿಸಿ ಕೃತಜ್ಞತಾ ಟ್ವೀಟ್ ಮಾಡಿದ್ದರು.

ಆಷಾಢ ಅಮವಾಸ್ಯೆ: ಸಿಗಂದೂರಿನಲ್ಲಿ ಜನಜಾತ್ರೆ; ಅನ್ ಲಾಕ್ ಆಗುತ್ತಿದ್ದಂತೆ ಕೊರೊನಾ ಮರೆತ ಜನ

ಆದರೆ ಸಸ್ಯಾಹಾರಿ ಬಿರಿಯಾನಿ ಪ್ರಸ್ತಾಪದ ಬಗ್ಗೆ ನೆಟ್ಟಿಗರು ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದರು. ಸಾಂಪ್ರದಾಯಿಕವಾಗಿ ಹೈದರಾಬಾದ್ ಬಿರಿಯಾನಿ ಮಾಂಸಾಹಾರಿ ತಿನಿಸಾಗಿದೆ ಎಂದು ನೆನಪಿಸಲು ಅನೇಕರು ವಿನೋದಮಯ ಕಾಮೆಂಟ್ ಮಾಡಿದ್ದರು.

‘ಎಕ್ಸಾಂ ಖತಮ್ ಹೋ ಗಯೆ, ರಿಸಲ್ಟ್ ಬಾಕಿ ಹೈ’: ಅಕ್ಷಯ್ ಕುಮಾರ್ ಮೆಮೆ ವೈರಲ್

ಕೋವಿಡ್ ಗಂಭೀರವಾಗಿದ್ದ ಸಮಯದಲ್ಲಿ ಸೋನು ಸೂದ್ ಅವರ ಜನೋಪಕಾರಿ ಕೆಲಸದಿಂದ ಜನಪ್ರಿಯರಾಗಿದ್ದು, ತೆಲಂಗಾಣದ ಸಚಿವರು ಸೂದ್‌ರನ್ನು ಸತ್ಕರಿಸಿದ್ದರು. ಸೋನುಸೂದ್ ಅವರನ್ನು ಸಚಿವರು ಸೂಪರ್ ಹೀರೋ ಎಂದೇ ಕರೆದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...