alex Certify ಅಪ್ಪು ಅಗಲಿಕೆ ನೋವಲ್ಲೂ ‘ಭಜರಂಗಿ -2’ಗೆ ನಟ ಶಿವಣ್ಣ ಸಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪು ಅಗಲಿಕೆ ನೋವಲ್ಲೂ ‘ಭಜರಂಗಿ -2’ಗೆ ನಟ ಶಿವಣ್ಣ ಸಾಥ್

ಬೆಂಗಳೂರು: ಅಪ್ಪು ಅಗಲಿಕೆ ನೋವಿನಲ್ಲೂ ‘ಭಜರಂಗಿ-2’ ಗೆ ನಟ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಅಭಿಮಾನಿಗಳೊಂದಿಗೆ ಕುಳಿತು ಸಿನಿಮಾ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಾನು ಬೆಂಗಳೂರಿನ ಗಾಂಧಿನಗರದಲ್ಲಿರುವ ಅನುಪಮಾ ಚಿತ್ರಮಂದಿರಕ್ಕೆ ಬರುತ್ತಿದ್ದೇನೆ. ನೀವು ಬನ್ನಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಅವರು ನಾಳೆ ಮಧ್ಯಾಹ್ನ ‘ಭಜರಂಗಿ -2’ ಸಿನಿಮಾ ವೀಕ್ಷಿಸಲಿದ್ದಾರೆ. ಈ ಮೂಲಕ ಅಪ್ಪು ಅಗಲಿಕೆ ನೋವಿನಲ್ಲಿಯೂ ನಿರ್ಮಾಪಕರ ಬೆಂಬಲಕ್ಕೆ ನಿಂತಿದ್ದಾರೆ.

‘ಭಜರಂಗಿ 2’ ಬಿಡುಗಡೆ ದಿನವೇ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಗಲಿದ್ದರಿಂದ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ನಂತರ ಚಿತ್ರ ಪ್ರದರ್ಶನ ಆರಂಭವಾದರೂ, ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ಮುಖ ಮಾಡಿರಲಿಲ್ಲ. ದೀಪಾವಳಿ ಬಳಿಕ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರತೊಡಗಿದ್ದು, ‘ಭಜರಂಗಿ -2’ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...