alex Certify ನಿನ್ನೆಯಷ್ಟೇ ಫೋಟೋ ಪೋಸ್ಟ್ ಮಾಡಿ ಸಂಭ್ರಮಿಸಿದ್ದ ಚಿರು ಇಂದು ಇಲ್ಲ: ಫೋಟೋ ವಿಶೇಷತೆ ಏನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿನ್ನೆಯಷ್ಟೇ ಫೋಟೋ ಪೋಸ್ಟ್ ಮಾಡಿ ಸಂಭ್ರಮಿಸಿದ್ದ ಚಿರು ಇಂದು ಇಲ್ಲ: ಫೋಟೋ ವಿಶೇಷತೆ ಏನು ಗೊತ್ತಾ…?

ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ನಿಧನರಾಗಿದ್ದಾರೆ. ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಅಂದ ಹಾಗೆ, ಚಿರಂಜೀವಿ ಸರ್ಜಾ ನಿನ್ನೆಯಷ್ಟೇ ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಸಹೋದರ ಧ್ರುವ ಸರ್ಜಾ ಮತ್ತು ಸಂಬಂಧಿ ಜೊತೆಗೆ ಇರುವ ಬಾಲ್ಯದ ಫೋಟೋವನ್ನು ಪೋಸ್ಟ್ ಮಾಡಿದ ಚಿರಂಜೀವಿ ಸರ್ಜಾ ಬೆಳೆದು ದೊಡ್ಡವರಾದ ನಂತರ ಈಗಿನ ಫೋಟೋ ಜೊತೆಗೆ ಹಾಕಿದ್ದಾರೆ.

ಬಾಲ್ಯದ ಮತ್ತು ಈಗಿನ ಫೋಟೋಗಳನ್ನು ಪೋಸ್ಟ್ ಮಾಡಿ ಅಂದು ಮತ್ತು ಇಂದು ನಾವು ಒಂದೇ ರೀತಿ ಎಂದು ಪೋಸ್ಟ್ ಹಾಕಿದ್ದಾರೆ. ನಿನ್ನೆಯಷ್ಟೇ ಬಾಲ್ಯದ ನೆನಪನ್ನು ಚಿರಂಜೀವಿ ಸರ್ಜಾ ಹಂಚಿಕೊಂಡಿದ್ದು ಇಂದು ಅಪಾರ ಅಭಿಮಾನಿಗಳು, ಬಂಧು ಬಳಗವನ್ನು ಅಗಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...