alex Certify BIG NEWS:‌ ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ – ಸ್ಪೋಟಕ ಸಂಗತಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ – ಸ್ಪೋಟಕ ಸಂಗತಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

ಬಾಲಿವುಡ್‌ ಚಿತ್ರರಂಗದ ಖ್ಯಾತ ನಟ ಸುಶಾಂತ್‌ ಸಿಂಗ್ ರಜಪೂತ್‌ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರಂಭದಲ್ಲಿ ಮುಂಬೈ ಹಾಗೂ ಬಿಹಾರ ಪೊಲೀಸರ ಜಟಾಪಟಿಗೆ ಕಾರಣವಾಗಿದ್ದ ಈ ಪ್ರಕರಣ ಈಗ ತನಿಖೆಗಾಗಿ ಸಿಬಿಐ ಕೈ ಸೇರಿದೆ. ಇದರ ಮಧ್ಯೆ ಸುಶಾಂತ್‌ ಸಾವನ್ನಪ್ಪಿದ ದಿನದಂದು ಹಾಜರಿದ್ದ ಪ್ರತ್ಯಕ್ಷದರ್ಶಿ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದು, ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

ಸುಶಾಂತ್‌ ಸಿಂಗ್‌ ದೇಹವನ್ನು‌ ಆಸ್ಪತ್ರೆಗೆ ಕೊಂಡೊಯ್ಯಲು ಸಹಕರಿಸಿದ್ದ ಈ ಪ್ರತ್ಯಕ್ಷದರ್ಶಿ, ಸುಶಾಂತ್‌ ದೇಹವನ್ನು ನನ್ನ ಮುಂದೆಯೇ ಪರಿಶೀಲಿಸಿದ್ದ ವೈದ್ಯರು ಇದು ಆತ್ಮಹತ್ಯೆಯಂತೆ ಕಾಣುತ್ತಿಲ್ಲ. ಕೊಲೆ ಎಂಬಂತೆ ಕಂಡು ಬರುತ್ತಿದೆ ಎಂದು ಪರಸ್ಪರ ಮಾತನಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ. ರಿಪಬ್ಲಿಕ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಪ್ರತ್ಯಕ್ಷದರ್ಶಿ ಈ ವಿಚಾರ ಬಿಚ್ಚಿಟ್ಟಿದ್ದಾರೆ.

ಅಲ್ಲದೇ ಆತ್ಮಹತ್ಯೆ ಪ್ರಕರಣವಾಗಿದ್ದಲ್ಲಿ ಬಾಯಿಂದ ನಾಲಿಗೆಹೊರ ಬರಬೇಕಾಗಿತ್ತು. ಅಲ್ಲದೇ ಮೂತ್ರ ವಿಸರ್ಜನೆಯಾಗಿರುವ ಲಕ್ಷಣಗಳು ಕಂಡು ಬರಬೇಕಾಗಿತ್ತು. ಆದರೆ ಸುಶಾಂತ್‌ ಸಿಂಗ್‌ ದೇಹದ ಮೇಲೆ ಅಂತಹ ಯಾವುದೇ ಲಕ್ಷಣಗಳಿರಲಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಸುಶಾಂತ್‌ ಸಿಂಗ್‌ ರ ಒಂದು ಕಾಲು ಮುರಿದಂತೆ ಕಾಣುತ್ತಿತ್ತು. ಕುತ್ತಿಗೆ ಮೇಲೆ ಸೂಜಿ ಚುಚ್ಚಿದಂತೆ ಗುರುತುಗಳು ಕಂಡು ಬರುತ್ತಿತ್ತು ಎಂದು ಹೇಳಿರುವ ಪ್ರತ್ಯಕ್ಷದರ್ಶಿ, ಉತ್ತಮ ಅಂಗಸೌಷ್ಟವವನ್ನು ಹೊಂದಿದ್ದ ಸುಶಾಂತ್‌ ಸಾವನ್ನಪ್ಪಿದ ಸಂದರ್ಭದಲ್ಲಿ ಈ ರೀತಿ ಕಾಣಿಸುತ್ತಿದ್ದರು ಎಂದಿದ್ದಾರೆ.

ಅಲ್ಲದೇ ಅಂದು ಬೆಳಗಿನ ಜಾವ ಸುಶಾಂತ್‌ ಸಿಂಗ್‌ ರಜಪೂತ್‌ ದೇಹವನ್ನು ವೀಕ್ಷಿಸಲು ಅವರ ಗೆಳತಿ ರಿಯಾ ಚಕ್ರವರ್ತಿ ಆಸ್ಪತ್ರೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸುಮಾರು 25 ನಿಮಿಷಗಳ ಕಾಲ ಅಲ್ಲಿರಲು ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ನಾನೂ ಸಹ ಹಾಜರಿದ್ದೆ ಎಂದು ಹೇಳಿರುವ ಈ ವ್ಯಕ್ತಿ ಸುಶಾಂತ್‌ ದೇಹವನ್ನು ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ರಿಯಾ ನನ್ನನ್ನು ಕ್ಷಮಿಸು ಎಂದು ಪದೇ ಪದೇ ಕೇಳಿಕೊಳ್ಳುತ್ತಿದ್ದರು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...