alex Certify ವಿಐಪಿ ಭದ್ರತೆಯೊಂದಿಗೆ ಬಂದ ಕಂಗನಾಗೆ ನೆಟ್ಟಿಗರ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಐಪಿ ಭದ್ರತೆಯೊಂದಿಗೆ ಬಂದ ಕಂಗನಾಗೆ ನೆಟ್ಟಿಗರ ವ್ಯಂಗ್ಯ

ಶಿವಸೇನಾ ನಾಯಕ ಸಂಜಯ್‌ ರೌತ್‌ ಜೊತೆಗೆ ಹರಾಕಿರಿ ಮಾಡಿಕೊಂಡು ಸುದ್ದಿ ಮಾಡುತ್ತಿದ್ದ ಬಾಲಿವುಡ್ ನಟಿ ಕಂಗನಾ ರನೌತ್‌ಗೆ ಸಿಆರ್‌ಪಿಎಫ್‌ ಸಿಬ್ಬಂದಿ ಇರುವ ವೈ-ಪ್ಲಸ್‌ ಭದ್ರತೆ ಒದಗಿಸಿದ್ದ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಭಾರೀ ಟೀಕೆಗೆ ಗುರಿಯಾಗಿತ್ತು.

ತನಗೆ ಜೀವ ಭಯ ಇರುವ ಕಾರಣ ತನಗೆ ಈ ಭದ್ರತೆ ಕೊಡಲಾಗಿದೆ ಎಂದು ಕಂಗನಾ ಹೇಳಿಕೊಂಡಿದ್ದರು. ಇದೀಗ ಮನಾಲಿಯಲ್ಲಿ ಒಂದಷ್ಟು ಸಮಯ ಕಳೆದ ಬಳಿಕ ತನ್ನ ಸಹೋದರಿ ರಂಗೋಲಿಯೊಂದಿಗೆ ಮತ್ತೆ ಮುಂಬಯಿಯಲ್ಲಿ ಕಾಣಿಸಿಕೊಂಡಿರುವ ಕಂಗನಾಗೆ ಈ ಬಾರಿಯೂ ಬಿಗಿ ಭದ್ರತೆ ಒದಗಿಸಲಾಗಿದೆ.

ಮುಂಬಯಿ ವಿಮಾನ ನಿಲ್ದಾಣದಲ್ಲಿ ವಿಐಪಿ ಭದ್ರತೆಯೊಂದಿಗೆ ಕಾರನ್ನೇರುತ್ತಿರುವ ಕಂಗನಾರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಟೀಕೆಗೆ ಗುರಿಯಾಗಿದೆ.

“ಈಕೆಯನ್ನು ಯಾರೂ ಕೇರ್‌ ಮಾಡದೇ ಇದ್ದರೂ ಇಷ್ಟೆಲ್ಲಾ ಭದ್ರತೆ ಏಕೆ?” ಎಂದು ಪ್ರಶ್ನಿಸಿ ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು “ಪ್ರಭಾವಿ ಜನರಿಗೆ ಭದ್ರತೆ ಕೊಟ್ಟು, ರೈತರ ಮೇಲೆ ಹಲ್ಲೆ ಮಾಡಿಸುವುದೇ ಈ ದೇಶದ ಹಣೆ ಬರಹವಾಗಿದೆ” ಎಂದು ಮತ್ತೊಬ್ಬರು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...