alex Certify ಮುಂಬೈನಲ್ಲಿ ತಂದೆ ನಿಧನ: ಲಾಕ್ ಡೌನ್ ಕಾರಣಕ್ಕೆ ಬೆಂಗಳೂರಿನಲ್ಲೇ ಉಳಿದ ಖ್ಯಾತ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈನಲ್ಲಿ ತಂದೆ ನಿಧನ: ಲಾಕ್ ಡೌನ್ ಕಾರಣಕ್ಕೆ ಬೆಂಗಳೂರಿನಲ್ಲೇ ಉಳಿದ ಖ್ಯಾತ ನಟ

ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ತಂದೆ ಬಸಂತಕುಮಾರ್ ಚಕ್ರವರ್ತಿ ಮಂಗಳವಾರ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ.

95 ವರ್ಷದ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಬಂಗಾಳಿ ಜನಪ್ರಿಯ ನಟಿ ರಿತುಪರ್ಣ ಸೇನ್ ಗುಪ್ತ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಟ್ವಿಟರ್ ನಲ್ಲಿ ಮಿಥುನ್ ಚಕ್ರವರ್ತಿ ಮತ್ತು ಅವರ ಕುಟುಂಬದವರಿಗೆ ಸಂತಾಪ ಸಂದೇಶ ನೀಡಿರುವ ರಿತುಪರ್ಣ, ನಿಮ್ಮ ತಂದೆಯವರ ನಿಧನಕ್ಕೆ ಸಂತಾಪಗಳು, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಹೇಳಿದ್ದಾರೆ.

ಲಾಕ್ಡೌನ್ ಜಾರಿಯಾಗಿರುವುದರಿಂದ ಸದ್ಯ ಬೆಂಗಳೂರಿನಲ್ಲಿ ಮಿಥುನ್ ಚಕ್ರವರ್ತಿ ಉಳಿದುಕೊಂಡಿದ್ದಾರೆ. ಅಂತಿಮ ವಿಧಿಗಳನ್ನು ನಿರ್ವಹಿಸಲು ಮುಂಬೈಗೆ ತೆರಳಲು ಅವರು ಪ್ರಯತ್ನ ನಡೆಸಿದ್ದಾರೆ. ದೇಶವ್ಯಾಪಿ ಲಾಕ್ ಡೌನ್ ಗೊಳಿಸಿ ಎಲ್ಲಾ ವಿಮಾನ, ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಮಿಥುನ್ ಚಕ್ರವರ್ತಿ ಬೆಂಗಳೂರಿನಲ್ಲಿಯೇ ಉಳಿದಿದ್ದಾರೆ.

ಅವರ ಹಿರಿಯ ಮಗ ನಿಮೋಹ್ ಚಕ್ರವರ್ತಿ ಮುಂಬೈನಲ್ಲಿದ್ದಾರೆ. ಬಸಂತ್ ಕುಮಾರ್ ಚಕ್ರವರ್ತಿ ಅವರ ಪತ್ನಿ ಸ್ಯಾಂಟಿಮೊಹಿ ಚಕ್ರವರ್ತಿ, ಹಿರಿಯ ಮಗ ಗೌರಂಗ್ ಚಕ್ರವರ್ತಿ ಅವರ ಕುಟುಂಬವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...