ಪ್ರತಿಭಟನಾನಿರತ ರೈತರ ಪರ ನಿಂತ ಬಾಲಿವುಡ್ನ ಖ್ಯಾತ ಗಾಯಕ 08-01-2021 6:53PM IST / No Comments / Posted In: Latest News, Entertainment ಬಾಲಿವುಡ್ ಗಾಯಕ ಮಿಕಾ ಸಿಂಗ್ ತಮ್ಮ ವಾಟರ್ ಬ್ರ್ಯಾಂಡ್ ಅನಾವರಣಗೊಳಿಸಿದ್ದು ಈ ನೀರಿನ ಬಾಟಲಿಗಳನ್ನ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ ಅಭಿಮಾನಿಗಳ ಬಳಿಯೂ ರೈತರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ. ರೈತರು ಕೇವಲ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿಲ್ಲ. ದೇಶದ ರೈತರನ್ನ ಸರಿಯಾಗಿ ನೋಡಿಕೊಳ್ಳದೇ ಹೋದರೆ ಸಂಪೂರ್ಣ ಆಹಾರ ಸರಪಳಿಯೇ ತುಂಡಾಗಿ ಹೋಗುತ್ತೆ ಎಂದು ಮಿಕಾ ಸಿಂಗ್ ಆತಂಕ ಹೊರಹಾಕಿದ್ದಾರೆ. ಇನ್ನು ತಮ್ಮ ವಾಟರ್ ಬ್ರ್ಯಾಂಡ್ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಶೇರ್ ಮಾಡಿರುವ ಮಿಕಾ ಸಿಂಗ್, ದೆಹಲಿ ಪ್ರತಿಭಟನಾ ಸ್ಥಳಕ್ಕೆ ಸಾಕಷ್ಟು ಬಾಟಲಿಗಳನ್ನ ಕಳುಹಿಸಿಕೊಟ್ಟಿದ್ದೇವೆ. ನೀವು ಕೂಡ ರೈತರಿಗೆ ಸಹಾಯ ಮಾಡಿ. ರೈತರ ಕಷ್ಟಕ್ಕೆ ನೆರವಾಗಲಿಚ್ಚಿಸುವವರು ಗೂಗಲ್ ಪೇ ಇಲ್ಲವೇ ಪೇಟಿಎಂ ಮೂಲಕ ಹಣ ಕಳುಹಿಸಿ ಅಂತಾ ಮನವಿ ಮಾಡಿದ್ದಾರೆ. ಇದಕ್ಕೂ ಮೊದಲು ಬಾಲಿವುಡ್ನ ಮತ್ತೊಬ್ಬ ಗಾಯಕ ದಲ್ಜೀತ್ ಸಿಂಗ್ ರೈತರಿಗೆ ಬೆಂಬಲ ಸೂಚಿಸಿ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಜಟಾಪಟಿ ನಡೆಸಿದ್ದರು. View this post on Instagram A post shared by Mika Singh (@mikasingh)