alex Certify ಪ್ರತಿಭಟನಾನಿರತ ರೈತರ ಪರ ನಿಂತ ಬಾಲಿವುಡ್​ನ ಖ್ಯಾತ ಗಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಭಟನಾನಿರತ ರೈತರ ಪರ ನಿಂತ ಬಾಲಿವುಡ್​ನ ಖ್ಯಾತ ಗಾಯಕ

ಬಾಲಿವುಡ್​ ಗಾಯಕ ಮಿಕಾ ಸಿಂಗ್​​ ತಮ್ಮ ವಾಟರ್​ ಬ್ರ್ಯಾಂಡ್​ ಅನಾವರಣಗೊಳಿಸಿದ್ದು ಈ ನೀರಿನ ಬಾಟಲಿಗಳನ್ನ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ ಅಭಿಮಾನಿಗಳ ಬಳಿಯೂ ರೈತರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.

ರೈತರು ಕೇವಲ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿಲ್ಲ. ದೇಶದ ರೈತರನ್ನ ಸರಿಯಾಗಿ ನೋಡಿಕೊಳ್ಳದೇ ಹೋದರೆ ಸಂಪೂರ್ಣ ಆಹಾರ ಸರಪಳಿಯೇ ತುಂಡಾಗಿ ಹೋಗುತ್ತೆ ಎಂದು ಮಿಕಾ ಸಿಂಗ್​ ಆತಂಕ ಹೊರಹಾಕಿದ್ದಾರೆ.

ಇನ್ನು ತಮ್ಮ ವಾಟರ್​ ಬ್ರ್ಯಾಂಡ್​ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಶೇರ್​ ಮಾಡಿರುವ ಮಿಕಾ ಸಿಂಗ್, ದೆಹಲಿ ಪ್ರತಿಭಟನಾ ಸ್ಥಳಕ್ಕೆ ಸಾಕಷ್ಟು ಬಾಟಲಿಗಳನ್ನ ಕಳುಹಿಸಿಕೊಟ್ಟಿದ್ದೇವೆ. ನೀವು ಕೂಡ ರೈತರಿಗೆ ಸಹಾಯ ಮಾಡಿ. ರೈತರ ಕಷ್ಟಕ್ಕೆ ನೆರವಾಗಲಿಚ್ಚಿಸುವವರು ಗೂಗಲ್​ ಪೇ ಇಲ್ಲವೇ ಪೇಟಿಎಂ ಮೂಲಕ ಹಣ ಕಳುಹಿಸಿ ಅಂತಾ ಮನವಿ ಮಾಡಿದ್ದಾರೆ.

ಇದಕ್ಕೂ ಮೊದಲು ಬಾಲಿವುಡ್​ನ ಮತ್ತೊಬ್ಬ ಗಾಯಕ ದಲ್ಜೀತ್​ ಸಿಂಗ್​ ರೈತರಿಗೆ ಬೆಂಬಲ ಸೂಚಿಸಿ ಬಾಲಿವುಡ್ ನಟಿ ಕಂಗನಾ ರಣಾವತ್​ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಜಟಾಪಟಿ ನಡೆಸಿದ್ದರು.

View this post on Instagram

A post shared by Mika Singh (@mikasingh)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...