alex Certify ಚಿರು ಸಾವಿನ ನೋವಿನಲ್ಲಿ ಭಾವನಾತ್ಮಕ ಪತ್ರ ಬರೆದ ಮೇಘನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರು ಸಾವಿನ ನೋವಿನಲ್ಲಿ ಭಾವನಾತ್ಮಕ ಪತ್ರ ಬರೆದ ಮೇಘನಾ

ಚಿರು ಸಾವು ಇಂದಿಗೂ ಶಾಕ್ ನೀಡುತ್ತಿದೆ. ಎಲ್ಲರೂ ಚಿರು ಬಹು ಕಾಲ ಬದುಕಬೇಕಿತ್ತು, ಹುಟ್ಟುವ ಮಗುವನ್ನು ನೋಡಬೇಕಿತ್ತು ಎಂದು ಹಂಬಲಿಸಿದ್ದರು. ಆದರೆ ವಿಧಿ ಇದ್ಯಾವುದಕ್ಕೂ ಅವಕಾಶ ನೀಡಿಲ್ಲ. ಇದೀಗ ನೋವಿನ ಬೆಂಕಿಯಲ್ಲಿ ಬೆಂದು ಮೌನಕ್ಕೆ ಶರಣಾಗಿದ್ದ ನಟಿ ಮೇಘನಾ ತಮ್ಮ ಪತಿ ಚಿರಂಜೀವಿ ಸರ್ಜಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಪತಿ ಹಾಗೂ ಹುಟ್ಟುವ ಮಗುವಿನ ಬಗ್ಗೆ ಫೇಸ್‌ಬುಕ್, ಟ್ವಿಟ್ಟರ್ ಹಾಗೂ ಇನ್‌ಸ್ಟಾಗ್ರಾಮನ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಚಿರು ಶಾಶ್ವತ, ಎಲ್ಲ ಸಂಬಂಧಗಳಿಗೂ ಮೀರಿದವ. ನಾನು ಪದೇ ಪದೇ ಪ್ರಯತ್ನ ಮಾಡುತ್ತಲೇ ಇದ್ದೇನೆ. ಆದರೆ ನಿನ್ನ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ. ಪ್ರಪಂಚದಲ್ಲಿರುವ ಎಲ್ಲೂ ಪದಗಳೇ ಸಿಗುತ್ತಿಲ್ಲ. ನನ್ನ ಸ್ನೇಹಿತ, ನನ್ನ ಪ್ರಿಯತಮ, ನನ್ನ ಸಂಗಾತಿ, ನನ್ನ ಮಗು, ನನ್ನ ಆತ್ಮವಿಶ್ವಾಸ, ನನ್ನ ಪತಿ ಇದೆಲ್ಲದಕ್ಕಿಂತ ನೀನು ಮಿಗಿಲು. ನೀನು ನನ್ನ ಆತ್ಮ, ಹೃದಯದ ಒಂದು ಭಾಗ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

ಇನ್ನು ಪ್ರತಿಸಲ ನಾನು ಬಾಗಿಲ ಕಡೆ ನೋಡಿದಾಗೆಲ್ಲಾ, ನೀನು ಐ ಆಮ್ ಹೋಮ್ ಎಂದು ಹೇಳುತ್ತಿದ್ದದ್ದು ನೆನಪಾಗುತ್ತದೆ. ಆದರೆ ಇನ್ನು ಮುಂದೆ ಹಾಗೆ ಹೇಳುವುದಿಲ್ಲ ಎನ್ನುವುದನ್ನು ನೆನಸಿಕೊಳ್ಳಲು ಆಗುತ್ತಿಲ್ಲ. ಪ್ರತಿ ದಿನ, ಪ್ರತಿಕ್ಷಣ ನಿನ್ನ ನೋಡಲಾಗದೆ, ಸ್ಪರ್ಶಿಸಲಾಗದೆ, ಮನಸ್ಸು ಕುಗ್ಗುತ್ತಿದೆ.

ನನ್ನನ್ನು ಹೆಚ್ಚು ಪ್ರೀತಿಸುತ್ತಿದ್ದ ವ್ಯಕ್ತಿ, ನನ್ನನ್ನು ಹಿಂದೆ ಬಿಟ್ಟು ನೀನೇ ಹೋದೆಯಾ..? ನಮ್ಮ ಮಗು ನಮ್ಮಿಬ್ಬರ ಪ್ರೀತಿಯ ಪ್ರತೀಕವಾಗಿ ನೀನು ನನಗೆ ನೀಡಿದ ಸುಂದರ, ಅಮೂಲ್ಯವಾದ ಗಿಫ್ಟ್….ಆ ಮಗುವನ್ನು ಭೂಮಿಗೆ ತರಲು ಹೆಚ್ಚು ಕಾತರಳಾಗಿದ್ದೇನೆ. ನಿನ್ನನ್ನು ಮತ್ತೆ ಬಿಗಿದಪ್ಪಲು, ನಿನ್ನ ನಗು ನೋಡಲು. ನಾನು ನಿನಗಾಗಿ ಕಾಯುತ್ತೇನೆ, ಇನ್ನೊಂದು ಕಡೆ ನೀನು ನನಗಾಗಿ ಕಾಯಿ ಎಂದಿದ್ದಾರೆ. ನನ್ನ ಉಸಿರಿರುವವರೆಗೂ ನೀನು ಜೀವಂತವಾಗಿರುತ್ತೀಯಾ. ನೀನು ನನ್ನೊಳಗಿದ್ದೀಯಾ. ನೀನು ನನ್ನವನು ಐ ಲವ್ ಯೂ ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...