alex Certify BREAKING NEWS: ಪತ್ರಕರ್ತೆ ದೂರಿನ ಮೇರೆಗೆ ನಟ ಅರೆಸ್ಟ್, ಕಾರಣ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಪತ್ರಕರ್ತೆ ದೂರಿನ ಮೇರೆಗೆ ನಟ ಅರೆಸ್ಟ್, ಕಾರಣ ಗೊತ್ತಾ…?

ಆನ್‌ ಲೈನ್ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪತ್ರಕರ್ತೆ ದೂರಿನ ಮೇರೆಗೆ ಮಲಯಾಳಂ ನಟ ಶ್ರೀನಾಥ್ ಭಾಸಿಯನ್ನು ಮರಡು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ದೂರಿನ ಪ್ರಕಾರ, ಕಳೆದ ವಾರ ನಡೆದ ಸಂದರ್ಶನದಲ್ಲಿ ಶ್ರೀನಾಥ್ ಭಾಸಿ ಪತ್ರಕರ್ತೆಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಶ್ಯೂರಿಟಿಗಳನ್ನು ಹಾಜರುಪಡಿಸಿದ ನಂತರ ಜಾಮೀನು ಪಡೆಯಬಹುದಾದ ಆರೋಪಗಳ ಕಾರಣ ಭಾಸಿ ಮರಡು ಪೊಲೀಸ್ ಠಾಣೆಯಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅವರ ಇತ್ತೀಚಿನ ಚಿತ್ರ “ಚಟ್ಟಂಬಿ” ಪ್ರಚಾರದ ಸಂದರ್ಭದಲ್ಲಿ ನಡೆದ ಸಂದರ್ಶನದಲ್ಲಿ ಘಟನೆ ನಡೆದಿದೆ. ನಂತರ ಕ್ಷಮೆಯಾಚಿಸಿದ ಅವರು, ತಾನು ಯಾರನ್ನೂ ನಿಂದಿಸಿಲ್ಲ. ಅವಮಾನಿಸಿದಾಗ ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿಕ್ರಿಯಿಸುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದೇನೆ. ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ. ಒಂದು ಗಂಟೆಯ ವಿಚಾರಣೆಯ ನಂತರ ಪೊಲೀಸರು ಯುವ ನಟನನ್ನು ಬಂಧಿಸಿದ್ದಾರೆ.

ಭಾಸಿ ರೇಡಿಯೋ ಜಾಕಿಯಾಗಿ ನಂತರ ವೀಡಿಯೊ ಜಾಕಿಯಾಗಿ ಕಾರ್ಯನಿರ್ವಹಿಸಿದ್ದು, 2011 ರಲ್ಲಿ ಬ್ಲೆಸ್ಸಿ ನಿರ್ದೇಶನದ ಮತ್ತು ಮೋಹನ್‌ ಲಾಲ್ ಮತ್ತು ಅನುಪಮ್ ಖೇರ್ ನಟಿಸಿದ ಬ್ಲಾಕ್‌ ಬಸ್ಟರ್ ಚಲನಚಿತ್ರ “ಪ್ರಾಣಾಯಂ” ನಲ್ಲಿ ಅವರು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ. ಇದುವರೆಗೆ ಸುಮಾರು 50 ಚಿತ್ರಗಳಲ್ಲಿ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...