alex Certify ಅನಾರೋಗ್ಯ ಸುದ್ದಿ: ಸೂಪರ್ ಸ್ಟಾರ್ ನೀಡಿದ ಸ್ಪಷ್ಟನೆಯೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾರೋಗ್ಯ ಸುದ್ದಿ: ಸೂಪರ್ ಸ್ಟಾರ್ ನೀಡಿದ ಸ್ಪಷ್ಟನೆಯೇನು…?

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯದ ಬಗ್ಗೆ ಇತ್ತೀಚೆಗೆ ಪತ್ರವೊಂದು ಬಹಿರಂಗವಾಗಿ ಅಭಿಮಾನಿಗಳಲ್ಲಿ ಆತಂಕವನ್ನುಂಟುಮಾಡಿತ್ತು. ಈ ಬಗ್ಗೆ ಸ್ವತ: ಸ್ಪಷ್ಟನೆ ನೀಡಿರುವ ರಜನಿಕಾಂತ್, ಪತ್ರದಲ್ಲಿ ಉಲ್ಲೇಖವಾಗಿದ್ದ ಮಾಹಿತಿ ನಿಜ ಎಂದು ಹೇಳಿದ್ದಾರೆ.

ರಜನಿಕಾಂತ್ ಅವರೇ ಬರೆದಿದ್ದಾರೆ ಎಂಬ ರೀತಿಯ ಪತ್ರವೊಂದು ಇತ್ತೀಚೆಗೆ ಲೀಕ್ ಆಗಿತ್ತು. ಅದರಲ್ಲಿ ಕಿಡ್ನಿ ಸಮಸ್ಯೆಯಿರುವ ಕಾರಣ ಕೊರೊನಾ ಸೋಂಕು ಹರಡುವ ಭೀತಿಯಿದೆ. ಹಾಗಾಗಿ ನಾನು ಹೊರಗಡೆ ಹೆಚ್ಚಾಗಿ ಓಡಾಡುತ್ತಿಲ್ಲ ಎಂದು ಬರೆಯಲಾಗಿತ್ತು. ಈ ಬಗ್ಗೆ ಇದೀಗ ಸ್ಪಷ್ಟನೆ ನೀಡಿರುವ ರಜನಿಕಾಂತ್, ಆ ಪತ್ರ ಬರೆದಿದ್ದು ನಾನಲ್ಲ ಆದರೆ ನನ್ನ ಆರೋಗ್ಯದ ಬಗ್ಗೆ ಅದರಲ್ಲಿದ್ದ ಮಾಹಿತಿ ಹಾಗೂ ಹೆಚ್ಚು ಓಡಾಟ ನಡೆಸದಂತೆ ವೈದ್ಯರು ನೀಡಿರುವ ಸಲಹೆ ಬಗ್ಗೆ ಇರುವ ಮಾಹಿತಿ ಸತ್ಯ ಎಂದು ತಿಳಿಸಿದ್ದಾರೆ.

ಇದೇ ವೇಳೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಮಾತನಾಡಿರುವ ರಜನಿಕಾಂತ್, ರಜನಿ ಮಕ್ಕಳ್ ಮಂಡ್ರಮ್ ಜೊತೆ ಚರ್ಚಿಸಿ ತಮ್ಮ ರಾಜಕೀಯ ನಿಲುವನ್ನು ಶೀಘ್ರದಲ್ಲಿ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...