alex Certify ಪದ್ಮಶ್ರೀ ಹಿಂತಿರುಗಿಸ್ತಾರಂತೆ ಕಂಗನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದ್ಮಶ್ರೀ ಹಿಂತಿರುಗಿಸ್ತಾರಂತೆ ಕಂಗನಾ

Kangana Ranaut Wants to Return Her Padma Shri Award. Here are ...

ತಮಗೆ ನೀಡಲಾಗಿದ್ದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಲೂ ಸಿದ್ಧ ಎಂದು ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಸವಾಲು ಹಾಕಿ ಬಾಲಿವುಡ್ ಅಂಗಳದಲ್ಲಿ ತಲ್ಲಣ ಮೂಡಿಸಿದ್ದಾರೆ.

ಸದಾ ತಮ್ಮ ಡೇರ್ ಡ್ಯಾಶಿಂಗ್ ನಡೆಗಳ ಮೂಲಕ ಸುದ್ದಿಯಲ್ಲಿರುವ ಕಂಗನಾ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಸಂಬಂಧ ಈ ಹೇಳಿಕೆ ನೀಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರು ಜೂನ್ 14 ರಂದು ಮುಂಬೈ ಬಾಂದ್ರಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಾಲಿವುಡ್ ನ ನೆಪೊಟಿಸಂ ಹಾಗೂ ಮಾಧ್ಯಮಗಳು ದೂರ ಇಟ್ಟಿದ್ದರಿಂದ ಒತ್ತಡ ತಡೆಯಲಾರದೇ ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿರುವ ಕಂಗನಾ ಬಾಲಿವುಡ್‌ನ ಖ್ಯಾತ ತಾರೆಯರು ಹಾಗೂ ಮಾಧ್ಯಮಗಳ ವಿರುದ್ಧ ಸರಣಿ ವಿಡಿಯೋಗಳನ್ನು ಮಾಡಿ ಬಿಟ್ಟು ಹರಿಹಾಯ್ದಿದ್ದರು. ತಮ್ಮನ್ನು ಪೊಲೀಸರು ವಿಚಾರಣೆಗೆ ಕರೆಸಿದ ಬಗ್ಗೆಯೂ ಆಕ್ಷೇಪಿಸಿದ್ದರು. ಈಗ ತಾನು ಹೇಳಿರುವ ಹೇಳಿಕೆಗಳಿಗೆ ಬದ್ಧ. ಅವುಗಳು ಅಸತ್ಯ ಎಂದು ಸಾಬೀತು ಮಾಡಿದರೆ, ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡುತ್ತೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...