alex Certify ಸಾಂಪ್ರದಾಯಿಕ ಉಡುಪಿನಲ್ಲಿ ಸಿದ್ಧಿ ವಿನಾಯಕ ದೇಗುಲಕ್ಕೆ ನಟಿ ಕಂಗನಾ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಂಪ್ರದಾಯಿಕ ಉಡುಪಿನಲ್ಲಿ ಸಿದ್ಧಿ ವಿನಾಯಕ ದೇಗುಲಕ್ಕೆ ನಟಿ ಕಂಗನಾ ಭೇಟಿ

ಬಾಲಿವುಡ್ ನಟಿ ಕಂಗನಾ ರಣಾವತ್ ಹಲವು ತಿಂಗಳುಗಳ ನಂತರ ಮುಂಬೈನ ಸಿದ್ಧಿವಿನಾಯಕ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಗಮನ ಸೆಳೆದರು.

ಹೈದರಾಬಾದಿನಲ್ಲಿ ತಲೈವಿ ಚಿತ್ರದ ಚಿತ್ರೀಕರಣ ಮುಗಿಸಿ
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ತವರು ನೆಲವಾದ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿದ್ದ ಕಂಗನಾ, ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದರು.

ಬಹುಕಾಲದ ನಂತರ ಮಹಾರಾಷ್ಟ್ರಕ್ಕೆ ಆಗಮಿಸಿದ್ದು, ಸಹೋದರಿ ರಂಗೋಲಿ ಚಾಂದೇಲ್ ಜೊತೆಗೆ ಮುಂಬಾದೇವಿ ಮತ್ತು ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದರು.

ಮಹಾರಾಷ್ಟ್ರದ ಸಂಸ್ಕೃತಿಯಂತೆಯೇ ಹಸಿರು ಬಣ್ಣದ ಕಾಸ್ತಾ ಸೀರೆ, ಕೆಂಪು ರವಿಕೆ, ಮೂಗಿಗೆ ನತ್ತು ಧರಿಸಿ ಆಕರ್ಷಣೀಯವಾಗಿ ಕಾಣುತ್ತಿದ್ದರು. ಹೆಚ್ಚಿನ ಭದ್ರತೆ ನೀಡಲಾಗಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಕಂಗನಾ, ನನ್ನ ನೆಚ್ಚಿನ ನಗರವಾದ ಮುಂಬೈ ಪರವಾಗಿ ನಿಂತದ್ದಕ್ಕೆ ಸಾಕಷ್ಟು ಹಗೆತನ ಕಟ್ಟಿಕೊಂಡಿದ್ದೇನೆ. ಇಂದು ಮುಂಬಾದೇವಿ ಮತ್ತು ಸಿದ್ಧಿವಿನಾಯಕ ಜೀ ಬಳಿ ತೆರಳಿ ಆಶೀರ್ವಾದ ಪಡೆದಿದ್ದೇನೆ. ನಾನಿಂದು ಪ್ರೀತಿಪೂರ್ವಕ ಸ್ವಾಗತ ಪಡೆದಿದ್ದೇನೆ. ರಕ್ಷೆ ಸಿಕ್ಕಂತಾಗಿದೆ. ಜೈ ಹಿಂದ್, ಜೈ ಮಹಾರಾಷ್ಟ್ರ ಎಂದು ಟ್ವಿಟ್ಟರ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...