alex Certify ಗೀತ ಸಾಹಿತಿ ಕೆ. ಕಲ್ಯಾಣ್ ದಾಂಪತ್ಯ ಕಲಹ ವಿಚಾರದಲ್ಲಿ ಬಿಗ್ ಟ್ವಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೀತ ಸಾಹಿತಿ ಕೆ. ಕಲ್ಯಾಣ್ ದಾಂಪತ್ಯ ಕಲಹ ವಿಚಾರದಲ್ಲಿ ಬಿಗ್ ಟ್ವಿಸ್ಟ್

ಬೆಳಗಾವಿ: ಖ್ಯಾತ ಗೀತ ಸಾಹಿತಿ ಕೆ. ಕಲ್ಯಾಣ್ ಅವರ ದಾಂಪತ್ಯದಲ್ಲಿ ಬಿರುಕು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಲ್ಯಾಣ್ ಅವರ ಪತ್ನಿ ಅಶ್ವಿನಿಯವರ ಸೋದರ ಸಂಬಂಧಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ನಿವಾಸಿ ಶಿವಾನಂದ ವಾಲಿ ಅವರ ಬಳಿ ಮಾಟ-ಮಂತ್ರದ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ.

ಶಿವಾನಂದ ವಾಲಿ ವಿರುದ್ಧ ಕಲ್ಯಾಣ್ ಅಪಹರಣ ಆರೋಪ ಮಾಡಿದ್ದಾರೆ. ಆತ ಪತ್ನಿಯನ್ನು ಪುಸಲಾಯಿಸಿ ಖಾತೆಯಿಂದ 19.80 ಲಕ್ಷ ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಕಲ್ಯಾಣ್ ದೂರಿದ್ದಾರೆ.

ನಮ್ಮ ದಾಂಪತ್ಯದಲ್ಲಿ ಬಿರುಕು ಬಂದಿರುವುದು ಅಚ್ಚರಿ ತಂದಿದೆ. ಗೊಂದಲ ಬಗೆಹರಿಯಲಿದೆ. ಪತ್ನಿ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ಅದರ ಬಗ್ಗೆಯೂ ಇವತ್ತು ಸ್ಪಷ್ಟಿಕರಣ ನೀಡುತ್ತೇನೆ. ವಾಸ್ತವಾಂಶ, ಸತ್ಯ, ಧರ್ಮ ಉಳಿಯುತ್ತದೆ. ನನ್ನ ಕುಟುಂಬದಲ್ಲಿ ಹಲವು ಸಣ್ಣಪುಟ್ಟ ಸಮಸ್ಯೆ ಬಂದಿದೆ. ಎಲ್ಲವನ್ನು ಬಗೆಹರಿಸಿಕೊಂಡು ಜೀವನ ನಡೆಸುತ್ತಿದ್ದೆವು. ಈಗ ಬಂದಿರುವ ಗೊಂದಲವನ್ನು ಕೂಡ ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಕಲ್ಯಾಣ್ ದೈಹಿಕ ಮಾನಸಿಕ ಕಿರುಕುಳ ನೀಡಿದ್ದು, ವಿಚ್ಛೇದನ ನೀಡಬೇಕೆಂದು ಕೋರಿ ಅವರ ಪತ್ನಿ ಅಶ್ವಿನಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ದಂಪತಿ ನಡುವೆ ರಾಜೀ ಮಾಡಿಸಲು ಕಲ್ಯಾಣ್ ಅವರ ಅಣ್ಣ, ಅತ್ತಿಗೆ ಬೆಳಗಾವಿಗೆ ಆಗಮಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...