alex Certify ಸೋನು – ಭೂಷಣ್ ಜಗಳದ ಮಧ್ಯೆ ಬಂದ ದಿವ್ಯಾ ಕಾಲೆಳೆದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನು – ಭೂಷಣ್ ಜಗಳದ ಮಧ್ಯೆ ಬಂದ ದಿವ್ಯಾ ಕಾಲೆಳೆದ ನೆಟ್ಟಿಗರು

ಗಾಯಕ ಸೋನು ನಿಗಮ್ – ಟಿ ಸೀರೀಸ್ ಮಾಲೀಕ ಭೂಷಣ್ ಕುಮಾರ್ ನಡುವಿನ ಕಿತ್ತಾಟಕ್ಕೆ ದಿವ್ಯಾ ಖೋಸಲ ಕುಮಾರ್ ಮಧ್ಯಪ್ರವೇಶ ಮಾಡಿದ್ದಾರೆ.

ಭೂಷಣ್ ವಿರುದ್ಧ ಸೋನು ಮಾಡಿದ್ದ ಆರೋಪಗಳಿಗೆ ದಿವ್ಯಾ ತಿರುಗೇಟು ನೀಡಿದ್ದು, 12 ನಿಮಿಷದ ವಿಡಿಯೋವೊಂದನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರಿದು ನೆಟ್ಟಿಗರಿಂದ ಟ್ರೋಲ್ ಗೆ ಒಳಗಾಗಿದ್ದು, ದಿವ್ಯಾರ ಕಾಲೆಳೆದಿದ್ದಾರೆ.

ಟಿ-ಸೀರೀಸ್ ವಿರುದ್ಧ ಸೋನು ಅಪಪ್ರಚಾರ ಮಾಡುತ್ತಿದ್ದು, ಸೋನು ಏಳಿಗೆಗೆ ತನ್ನ ಮಾವ ಹಾಗೂ ಟಿ-ಸೀರೀಸ್ ಸಂಸ್ಥಾಪಕ ಗುಲ್ಶಾನ್ ಕುಮಾರ್ ಅವರೇ ಕಾರಣ ಎಂದಿದ್ದಾರೆ.

ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ 5 ರುಪಾಯಿಗೆ ಹಾಡಿಕೊಂಡಿದ್ದ ಸೋನು ಅವರಲ್ಲಿದ್ದ ಪ್ರತಿಭೆ ಗುರುತಿಸಿದ್ದೇ ಗುಲ್ಶಾನ್ ಕುಮಾರ್. ಹೊಸ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿಕೊಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಸೋನು ನಿಗಮ್ ಎಷ್ಟು ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ? ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.

ಸಾಲದ್ದಕ್ಕೆ ತನ್ನ ಮನೆಯ ಅಡುಗೆ ಭಟ್ಟನ ಮೂಲಕವೂ ಸೋನು ನಿಗಮ್ ವಿರುದ್ಧ ಹೇಳಿಕೆಗಳನ್ನು ಕೊಡಿಸಿ, ಭಗವದ್ಗೀತೆಯ ಸಾಲುಗಳನ್ನ ಕೋಟ್ ಮಾಡಿ ಸೋನುಗೆ ಬುದ್ಧಿವಾದ ಹೇಳಿದ್ದಾರೆ.

ಆದರೆ, ನೆಟ್ಟಿಗರು ಸೋನು ನಿಗಮ್ ಪರ ನಿಂತಿದ್ದು, ದಿವ್ಯಾಗೂ ರಾಮಾಯಣ, ಮಹಾಭಾರತ, ಭಗವದ್ಗೀತೆ ಬೋಧಿಸಿ ಕಾಲೆಳೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...