alex Certify ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ಕಾರಿ ಹೇಳಿಕೆಗೆ ಪವರ್ ಸ್ಟಾರ್ ಪುನೀತ್ ಫ್ಯಾನ್ಸ್ ಗರಂ: ಜಾಲತಾಣಗಳಲ್ಲಿ ಅಭಿಮಾನಿಗಳ ಸಮರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ಕಾರಿ ಹೇಳಿಕೆಗೆ ಪವರ್ ಸ್ಟಾರ್ ಪುನೀತ್ ಫ್ಯಾನ್ಸ್ ಗರಂ: ಜಾಲತಾಣಗಳಲ್ಲಿ ಅಭಿಮಾನಿಗಳ ಸಮರ

‘ಕ್ರಾಂತಿ’ ಸಿನಿಮಾದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ.

‘ನಿಮ್ಮ ಫ್ಯಾನ್ ಬೇಸ್ ತೋರಿಸೋಕೆ ದೇವರಾಗಿರುವ ಅಪ್ಪು ಸಾರ್ ಅವಮಾನಿಸುವುದು ಸರಿಯಲ್ಲ. ನಿಮ್ಮ ಅಭಿಮಾನಿಗಳ ಬಗ್ಗೆ ಹೊಗಳಿ. ಅದನ್ನು ಬಿಟ್ಟು ಇನ್ನೊಬ್ಬರ ಬಗ್ಗೆ ಅವಮಾನವಾಗಿ ಮಾತನಾಡುವುದು ಸರಿಯಲ್ಲ. ನಿಮ್ಮ ಹೇಳಿಕೆ ಅಪ್ಪು ಫ್ಯಾನ್ಸ್ ಗೆ ನೋವು ತಂದಿದೆ. ಕ್ಷಮೆ ಕೇಳಬೇಕು’ ಎಂದು ಪುನೀತ್ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಅಷ್ಟಕ್ಕೂ ದರ್ಶನ್ ಹೇಳಿದ್ದೇನೆಂದರೆ, ‘ಕ್ರಾಂತಿ’ ಚಿತ್ರಕ್ಕೆ ಅಭಿಮಾನಿಗಳೇ ಪ್ರಚಾರ ಮಾಡುತ್ತಿದ್ದಾರೆ. ಪ್ರೀತಿ ತೋರಿಸುತಿದ್ದಾರೆ. ಅವರ ಅಭಿಮಾನದಿಂದಲೇ ‘ಕ್ರಾಂತಿ’ ಈ ಮಟ್ಟಕ್ಕೆ ಬಂದಿದೆ. ಅಭಿಮಾನ ಏನು ಎನ್ನುವುದನ್ನು ಸತ್ತ ಮೇಲೆ ತೋರಿಸುವುದಿದೆ. ಪುನೀತ್ ರಾಜಕುಮಾರ್ ಅವರ ಮೇಲಿನ ಅಭಿಮಾನ ನೋಡಿರಬಹುದು. ನನಗೆ ಬದುಕಿರುವಾಗಲೇ ಜನ ಅಭಿಮಾನ ತೋರಿಸಿದ್ದಾರೆ. ಸಾಕು ಇನ್ನೇನಾಗಬೇಕು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಹೇಳಿಕೆಗೆ ಅಪ್ಪು ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಿರ್ದೇಶಕ ದುನಿಯಾ ಸೂರಿ ದರ್ಶನ್ ಪರ ಹೇಳಿಕೆ ನೀಡಿದ್ದಾರೆ. ಪುನೀತ್ ನಿಧನರಾದ ಸಂದರ್ಭದಲ್ಲಿ ದರ್ಶನ್ ಹುಟ್ಟು ಹಬ್ಬ ಆಚರಿಸುವುದಿಲ್ಲ ಎಂದು ಹೇಳಿದ್ದರು. ಪುನೀತ್ ಅವರ ಬಗ್ಗೆ ಸೌಜನ್ಯತೆ ಹೊಂದಿದ್ದರು. ಪುನೀತ್ ಅವರಿಗೆ ನಿಧನದ ಬಳಿಕ ದೊಡ್ಡ ಗೌರವ ಸಿಕ್ಕಿತು. ನನಗೆ ಈಗಲೇ ಸಿಕ್ಕಿದೆ. ಇಷ್ಟೇ ಸಾಕು ಎಂದು ಒಳ್ಳೆಯ ರೀತಿಯಲ್ಲಿ ಹೇಳಿದ ಮಾತನ್ನು ತಿರುಚಿ ಡಿ ಬಾಸ್ ಪುನೀತ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ದರ್ಶನ್ ಅವರನ್ನು ಕೆಟ್ಟವರೆನ್ನುವಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೋಸ್ಟ್ ಹಾಕಿದ್ದಾರೆ.

ಇದಕ್ಕೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ದರ್ಶನ್, ಅಪ್ಪು ಫ್ಯಾನ್ಸ್ ಗಳ ನಡುವೆ ಜಾಲತಾಣಗಳಲ್ಲಿ ಸಮರವೇ ನಡೆದಿದೆ. ತಪ್ಪೇನು ಹೇಳಿಲ್ಲವೆಂದು ದರ್ಶನ್ ಅವರ ಅಭಿಮಾನಿಗಳು ಹೇಳಿದ್ದು, ಅವರು ಕ್ಷಮೆ ಕೇಳಬೇಕೆಂದು ಅಪ್ಪು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

https://twitter.com/DirectorSoori/status/1555979071078641664

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...